ಸಚಿವ ಅಶ್ವಥ್ ನಾರಾಯಣ ವಿರುದ್ಧ ಪ್ರಗತಿಪರರ ಪ್ರತಿಭಟನೆ

0
7

ಸುರಪುರ:ಮಾಜಿ ಸಿಎಮ್ ಸಿದ್ದರಾಮಯ್ಯನವರ ವಿರುದ್ಧ ಕೊಲೆ ಮಾತನಾಡಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ಪ್ರಗತಿಪರ ಸಾಮೂಹಿಕ ಸಂಘಟನೆಗಳ ವೇದಿಕೆ ಮುಖಂಡರು ಪ್ರತಿಭಟನೆ ನಡೆಸಿದರು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾವಣೆಗೊಂಡ ಅನೇಕ ಮುಖಂಡರು ಸರಕಾರ ಹಾಗೂ ಸಚಿವ ಅಶ್ವಥ್ ನಾರಾಯಣ ವಿರುದ್ಧ ಘೋಷಣೆಗಳನ್ನು ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಟಿಪ್ಪು ಸುಲ್ತಾನ ಬಗ್ಗೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ ಸಿದ್ದರಾಮಯ್ಯನವರನ್ನು ಟಿಪ್ಪು ಸುಲ್ತಾನನಂತೆ ಹೊಡೆದು ಹಾಕಬೇಕು ಎಂದು ಹೇಳಿಕೆಯನ್ನು ನೀಡಿ ಕೊಲೆಯ ಮಾತನಾಡುತ್ತಾನೆ.ಇದು ಬಿಜೆಪಿಯವರ ಸಂಸ್ಕøತಿಯನ್ನು ತೋರಿಸುತ್ತದೆ.ಟಿಪ್ಪು ಸುಲ್ತಾನ ಬ್ರಿಟೀಷರ್ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಶೂರ ಅರಸನಾಗಿದ್ದನು,ಆದರೆ ಇಂದು ಅಶ್ವಥ್ ನಾರಾಯಣನಂತ ಕೋಮುವಾದಿಗಳು ಟಿಪ್ಪು ಸುಲ್ತಾನನ್ನು ದೇಶದ್ರೋಹಿ ಎನ್ನುವಂತೆ ಬಿಂಬಿಸಲು ಮುಂದಾಗಿದ್ದಾರೆ.

Contact Your\'s Advertisement; 9902492681

ಅಲ್ಲದೆ ಟಿಪ್ಪು ಸುಲ್ತಾನನನ್ನು ಯಾರೋ ಗೌಡ ಎನ್ನುವವರು ಕೊಂದರು ಎಂದು ಸುಳ್ಳು ಇತಿಹಾಸ ಸೃಷ್ಟಿಸಲು ಮುಂದಾಗಿದ್ದಾರೆ.ಆದರೆ ಟಿಪ್ಪುವನ್ನು ಬ್ರಿಟೀಸರು ಕೊಂದ ನಂತರ ಎರಡು ದಿನಗಳ ಕಾಲ ಅವರ ಬಳಿ ಹೋಗಲು ಹೆದರಿದ್ದರು ಎಂದು ಇತಿಹಾಸ ಹೇಳುತ್ತದೆ.ಅಲ್ಲದೆ ಅವರನ್ನು ಮೈಸೂರ ಹುಲಿ ಎಂದು ಕರೆಯುತ್ತಿದ್ದರು.ಅಂತಹ ಟಿಪ್ಪುವಿನ ಬಗ್ಗೆ ಅರಿವಿಲ್ಲದೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ ಸಿದ್ದರಾಮಯ್ಯನವರನ್ನು ಹೊಡೆದು ಹಾಕಬೇಕು ಎಂದು ತಾನೊಬ್ಬ ಅವಿವೇಕಿ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.ಆದ್ದರಿಂದ ಕೊಲೆಗಡುಕ ಮನಸ್ಥಿತಿಯ ಅಶ್ವಥ್ ನಾರಾಯಣನನ್ನು ಕೂಡಲೇ ಸಂಪುಟ ದಿಂದ ವಜಾಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಸಿದರು.

ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಕ್ರಾಂತಿ,ಮಲ್ಲಯ್ಯ ಕಮತಗಿ,ದೇವಿಂದ್ರಪ್ಪ ಪತ್ತಾರ,ವೆಂಕಟೇಶ ಬೇಟೆಗಾರ,ರಾಹುಲ ಹುಲಿಮನಿ,ಭೀಮರಾಯ ಸಿಂಧಗೇರಿ,ಹಣಮಂತ್ರಾಯ ಚಂದಲಾಪುರ,ಮುದ್ದಣ್ಣ ಅಮ್ಮಾಪುರ,ಮಾನಪ್ಪ ಕರಡಕಲ್,ಯಲ್ಲಪ್ಪ ಚಿನ್ನಾಕಾರ, ಬುಚ್ಚಪ್ಪ ನಾಯಕ,ಭಾಗನಾತ ಗುತ್ತೇದಾರ,ಬಸವರಾಜ ದೊಡ್ಮನಿ,ರಾಮಣ್ಣ ಶೆಳ್ಳಗಿ,ಖಾಜಾಹುಸೇನ ಗುಡಗುಂಟಿ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here