ಶ್ರೀ ರೇಣುಕಾಚಾರ್ಯರ ದಿವ್ಯ ಜ್ಯೋತಿ ಯಾತ್ರೆಗೆ ಚಾಲನೆ

0
11

ಕಲಬುರಗಿ: ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತ್ಯೋತ್ಸವ ಅಂಗವಾಗಿ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತ್ಯೋತ್ಸವ ಸಮಿತಿ ಹಾಗೂ ಲಿಂ. ಶ್ರೀ ಚಂದ್ರಶೇಖರ ಪಾಟೀಲ ರೇವೂರ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಜಗದ್ಗುರು ಶ್ರೀ ರೇಣುಕಾಚಾರ್ಯರ ದಿವ್ಯ ಜ್ಯೋತಿ ಯಾತ್ರೆಗೆ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಲಾಯಿತು. ಶ್ರೀನಿವಾಸ ಸರಡಗಿಯ ಪೂಜ್ಯ ಶ್ರೀ ರೇವಣಸಿದ್ದ ಶಿವಾಚಾರ್ಯರು, ಮುತ್ಯಾನ ಬಬಲಾದ ಮಠದ ಪೂಜ್ಯ ಶ್ರೀ ಗುರುಪಾದಲಿಂಗ ಮಹಾಶಿವಯೋಗಿಗಳು, ಸಾವಳಗಿಯ ಪೂಜ್ಯ ಶ್ರೀ ಗುರುನಾಥ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಮಾತೋಶ್ರೀ ದ್ರಾಕ್ಷಾಯಣಿ ಎಸ್. ಅಪ್ಪಾ ರವರ ಉಪಸ್ಥಿತಿಯಲ್ಲಿ ಶ್ರೀಮತಿ ಲಕ್ಷ್ಮೀ ದತ್ತಾತ್ರೇಯ ಪಾಟೀಲ ರೇವೂರ ಜ್ಯೋತಿ ಯಾತ್ರೆಗೆ ಚಾಲನೆ ನೀಡಿದರು.

ಪ್ರಾರಂಭಗೊಂಡಿರುವ ಜ್ಯೋತಿ ಯಾತ್ರೆ ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳನ್ನು ಮಾರ್ಗಮಧ್ಯದಲ್ಲಿ ಬರುವ ಹೋಬಳಿ ಕೇಂದ್ರಗಳಲ್ಲಿ ಸಂಚರಿಸಿ ವಿವಿಧ ಧಾರ್ಮಿಕ ಕ್ಷೇತ್ರ ಗಳಿಗೆ ಭೇಟಿ ನೀಡಲಿದೆ. ಜಿಲ್ಲೆಯಾದ್ಯಂತ ಸಂಚರಿಸುವ ಜ್ಯೋತಿ ಯಾತ್ರೆ ಮಾರ್ಚ 4 ರಂದು ಕಲಬುರಗಿ ಪುರಪ್ರವೇಶ ಮಾಡಲಿದೆ. ಜಿಲ್ಲೆಯ ಸದ್ಭಕ್ತಾದಿಗಳು ತಮ್ಮ ತಮ್ಮ ತಾಲೂಕಾ ಕೇಂದ್ರಗಳಿಗೆ ಬರುವ ಮಾರ್ಗ ಮಧ್ಯದಲ್ಲಿ ಭವ್ಯ ರೀತಿಯಿಂದ ಸ್ವಾಗತಿಸಲಿದ್ದಾರೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಶರಣಕುಮಾರ ಮೋದಿ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾದ ಡಾ: ಅಣವೀರಯ್ಯ ಪ್ಯಾಟಿಮನಿ, ಜಯಂತ್ಯೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಶಿವಕಾಂತ ಮಹಾಜನ, ಮಹಿಳಾ ಘಟಕದ ಅಧ್ಯಕ್ಷರಾದ ಗುರುಬಾಯಿ ವಸ್ತ್ರದ, ಜಯಂತ್ಯೋತ್ಸವ ಸಮಿತಿ ಪದಾಧಿಕಾರಿಗಳಾದ ಮಚೇಂದ್ರನಾಥ ಮೂಲಗೆ, ವೀರು ಸ್ವಾಮಿ, ರುದ್ರಮುನಿ ಮಠಪತಿ ಕೊಂಚೂರ, ಚನ್ನವೀರ ಹಿರೇಮಠ, ಮಹೇಶ್ವರ ಶಾಸ್ತ್ರಿ, ಮಂಜುನಾಥ ಕಂಬಳಿಮಠ, ರುದ್ರಯ್ಯ ಹಿರೇಮಠ, ರಾಚೋಟಯ್ಯ ಹಿರೇಮಠ, ಜಿ.ಕೆ.ಪಾಟೀಲ ಹರಸೂರ, ರಮೇಶ ಬೀದರಕರ, ಆನಂದ ಹಿರೇಮಠ, ರಾಜು ಅವಂಟಿ, ವೀರಶೈವ ಮಹಾಸಭಾದ ಪದಾಧಿಕಾರಿಗಳಾದ ಸೋಮಶೇಖರ ಹಿರೇಮಠ, ನಾಗಲಿಂಗಯ್ಯ ಮಠಪತಿ, ಜ್ಯೋತಿ ಮರಗೋಳ, ಗೌರಿ ಚಿಚಕೋಟೆ, ಕೋಮಲಾ ಮಹಾಜನ, ಭಾಗೀರಥಿ ಗುನ್ನಾಪೂರ, ಸಾಗರ ಹಿರೇಮಠ, ಜ್ಯೋತಿ ಯಾತ್ರೆಯ ಸಂಚಾಲಕರಾದ ವಿಶ್ವನಾಥ ಸಾಲಿಮಠ, ಮೃತ್ಯುಂಜಯ ಪಲ್ಲಾಪೂರಮಠ, ವೀರಭದ್ರಯ್ಯ ಆರ್. ಮಠ ಸೇರಿದಂತೆ ಸಮಿತಿಯ ಮತ್ತು ಫೌಂಡೇಶನ್‍ನ ಪದಾಧಿಕಾರಿಗಳು ವೀರಶೈವ ಲಿಂಗಾಯತ ಜಂಗಮ ಸಮುದಯದ ಬಾಂಧವರು, ಜಗದ್ಗುರು ಶ್ರೀ ರೇಣುಕಾಚಾರ್ಯರ ಸಧ್ಬಕ್ತಾದಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here