ವಸತಿನಿಲಯಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ವಿದ್ಯಾರ್ಥಿಗಳ ಆಗ್ರಹ

0
46

ಕಲಬುರಗಿ: ಗುಣಮಟ್ಟದ ಆಹಾರ ಮತ್ತು ಮೂಲ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ವಸತಿ ನಿಲಯದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುವ ಮೂಲಕ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ನಡೆಯನ್ನು ಖಂಡಿಸಿದ ಘಟನೆ ನಡೆದಿದೆ.

ನಗರದ ಹೈಕೋರ್ಟ್ ಸಮೀಪದ ಗ್ರೀನ್ ಪಾರ್ಕ್ ನಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಲ್ಲಿ ದಲಿತ ಸೇನೆಯ ಉಪಾಧ್ಯಕ್ಷ ಕಪಿಲ ವಾಲಿ ನೇತೃತ್ವದಲ್ಲಿ ವಿಧ್ಯಾರ್ಥಿಗಳು ಬಕೆಟ್ ಹಿಡಿದು ವಿನೂತನವಾಗಿ ಪ್ರತಿಭಟಿಸಿದರು.

Contact Your\'s Advertisement; 9902492681

ಕಳೆದ ಮೂರು ದಿನಗಳಿಂದ ಹಾಸ್ಟೆಲ್ ನಲ್ಲಿ ನೀರು ಬಾರದಿದ್ದರೂ ತೆಲೆ ಕೆಡಿಸಿಕೊಳ್ಳದ ವಸತಿ ನಿಲಯದ ಆಡಳಿತ ಮಂಡಳಿಯ ವಿರುದ್ದ ಕಿಡಿಕಾರಿದರು. ವಸತಿ ನಿಲಯಕ್ಕೆ ಸೇರಿಕೊಂಡಾಗಿನಿಂದಲೂ ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದೇವೆ. ಕಳೆದ ಮೂರು ದಿನಗಳಿಂದ ನೀರಿನ ಸಮಸ್ಯೆ ಎದುರಾದ್ರೂ ಸಹ ಇಲ್ಲಿನ ಅಧಿಕಾರಿ ಕಿಂಚಿತ್ತೂ ತೆಲೆ ಕಡೆಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಅμÉ್ಟ ಅಲ್ಲದೆ ನಗರದ ಹೊರವಲಯದಲ್ಲಿರುವ ಈ ವಸತಿ ನಿಲಯ ಕ್ಕೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ ಈ ವಸತಿ ನಿಲಯದಲ್ಲಿ ಸರಿಯಾದ ಸಮಯಕ್ಕೆ ಊಟ ಸಹ ನೀಡುವುದಿಲ್ಲ. ಕೆಲವೊಂದು ಬಾರಿ ಕಾಲೇಜ್’ಗೆ ಉಪವಾಸವೆ ಹೋಗಿದ್ದೆವೆ. ಕೆಳಿದ್ರೆ ಇಲ್ಲಿನ ಅಧಿಕಾರಿಗಳು ಪ್ರತಿನಿತ್ಯ ಒಂದೊಂದು ಕುಂಟು ನೆಪವನ ಹೇಳತಾರೆ ಕ್ರೀಡಾ ಸೌಲಭ್ಯದ ಕೊರತೆ ಕೂಡ ಇಲ್ಲಿದೆ ಎಂದು ವಿಧ್ಯಾರ್ಥಿ ಯಮುನಪ್ಪ ದೂರಿದರು.

ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿಯುತ್ತಿದ್ದಂತೆ ಹಾಸ್ಟೆಲ್ ನತ್ತ ಧಾವಿಸಿದ ಅಧಿಕಾರಿಗಳು ವಸತಿ ನಿಲಯದಲ್ಲಿರುವ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದಷ್ಟು ಬೇಗ ಸರಿಪಡಿಸಲೂ ಅಧಿಕಾರಿಗಳು ಸಹ ಸೂಚನೆಯನ್ನು ನೀಡಿದ್ದಾರೆ. ಕುಡಿಯುವ ನೀರಿನ ಸಮಸ್ಯೆ, ಊಟದ ವ್ಯವಸ್ಥೆ ಎಲ್ಲವೂ ಕೂಡ ಅತಿ ಶೀಘ್ರದಲ್ಲಿ ಸರಿಪಡಿಸಲಾಗುವುದು ಎಂದು ಹಾಸ್ಟಲ್ ವಾರ್ಡನ್ ಮರೆಪ್ಪ ಛಲವಾದಿ ಭರವಸೆ ನೀಡಿದರು.

ದಲಿತ ಸಮಿತಿಯ ಉಪಾಧ್ಯಕ್ಷ ಕಪಿಲ್ ವಾಲಿ ದಲಿತ ಸೇನೆಯ ವಿಧ್ಯಾರ್ಥಿ ಘಟಕದ ರಾಜ್ಯಧ್ಯಕ್ಷ ಶಿವಲಿಂಗಪ್ಪ ದೊಡ್ಡಮನಿ ವಸತಿ ನಿಲಯದ ವಾರ್ಡನ್ ಅವರಿಗೆ ಮನವಿಪತ್ರ ಸಲ್ಲಿಸಿದರು. ವಿದ್ಯಾರ್ಥಿಗಳಾದ ದಿಲೀಪ್ ಆಕಾಶ್ ಮಂಜುನಾಥ್, ಪ್ರಕಾಶ ಕೃಷ್ಣ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here