ಜೇವರ್ಗಿ: ಮಾ.4 ಮತ್ತು 5 ರಂದು ಬಸವಕಲ್ಯಾಣದಲ್ಲಿ ನಡೆಯುವ ರಾಷ್ಟ್ರೀಯ ಲಿಂಗಾಯತ್ ಮಹಾ ಅಧಿವೇಶನಕ್ಕೆ ಹೋಗಲು ಜಾಗತಿಕ ಲಿಂಗಾಯತ ಮಹಾಸಭಾ ಜೇವರ್ಗಿ ತಾಲೂಕ ಘಟಕದ ವತಿಯಿಂದ ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ತಾಲ್ಲೂಕು ಅಧ್ಯಕ್ಚ ನೀಲಕಂಠರಾವ ಅವಂಟಿ ತಿಳಿಸಿದ್ದಾರೆ.
ಅಧಿವೇಶನಕ್ಕೆ ಹೋಗಲು ಇಚ್ಚಿಸುವ ಸಮಸ್ತ ಬಸವ ಅಭಿಮಾನಿಗಳು ಸಂಘಟನೆಯ ಕಾರ್ಯದರ್ಶಿಗಳಾದ ಅಖಂಡಪ್ಪ ಕಲ್ಲಾ, ವಿಶ್ವನಾಥ್ ರೆಡ್ಡಿ ರಾಜಳ್ಳಿ ಮತ್ತು ವೀರನಗೌಡ ಪಾಟೀಲ ಗುಳ್ಯಾಳ ಇವರ ಹತ್ತಿರ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.