ವಿಜಯ ಸಂಕಲ್ಪ ಯಾತ್ರೆ: ಶಹಾಬಾದನಲ್ಲಿ ಯಡಿಯೂರಪ್ಪ ಬೃಹತ್ ರೋಡ್ ಶೋ

0
15

ಕಲಬುರಗಿ:ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ನಿಮಿತ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಹಾಬಾದ ನಗರದಲ್ಲಿ ಮಂಗಳವಾರ ಬೃಹತ್ ರೋಡ್ ಶೋ ನಡೆಸಿದರು.

ಬಸವೇಶ್ವರ ವೃತ್ತದಿಂದ ಆರಂಭವಾದ ರೋಡ್ ಶೋ ಶಾಸ್ತ್ರಿ ವೃತ್ತದ ಮೂಲಕ ತ್ರಿಶೂಲ ವೃತ್ತ ತಲುಪಿತು. ಮಾರ್ಗದುದ್ದಕ್ಕೂ ವಿವಿಧ ವಾದ್ಯಮೇಳಗಳು ಕಳೆತಂದವು. ಅಪಾರ ಸಂಖ್ಯೆಯಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ನಿರಂತರ ಜೈಕಾರ ಮೊಳಗಿಸಿದರು. ಯಡಿಯೂರಪ್ಪ ಅವರ ಸ್ವಾಗತಕ್ಕಾಗಿ ಪಟ್ಟಣವನ್ನು ಕೇಸರಿಮಯ ಮಾಡಲಾಗಿತ್ತು.ರೋಡ್ ಶೋನಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು.

Contact Your\'s Advertisement; 9902492681

ಬಿಜೆಪಿ ಬಾವುಟ ಹಿಡಿದು, ಕೇಸರಿ ರುಮಾಲು, ಟೊಪ್ಪಿಗೆ ಹಾಕಿಕೊಂಡು ಕಾರ್ಯಕರ್ತರು ಮೆರವಣಿಗೆ ಮುಂದೆ ಕುಣಿದು ಕುಪ್ಪಳಿಸಿದರು. ಲಂಬಾಣಿ ಮಹಿಳಾ ತಂಡದ ಲಂಬಾಣಿ ಕುಣಿತದ ಮೂಲಕ ಗಮನ ಸೆಳೆದರು.ಅಲ್ಲದೇ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಅವರನ್ನು ಬಿಜೆಪಿ ಕಾರ್ಯಕರ್ತರು ಹೆಗಲ ಮೇಲೆ ಕುಳಿಸಿಕೊಂಡು ಕುಣಿದು ಸಂಭ್ರಮಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ.ಉಮೇಶ ಜಾಧವ, ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಕ್ಷ್ಮಣ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ರವಿಕುಮಾರ, ಸುನೀಲ ವಲ್ಯಾಪುರೆ, ಮಾಲಿಕಯ್ಯ ಗುತ್ತೆದಾರ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಶಾಸಕರಾದ ಬಸವರಾಜ ಮತ್ತಿಮಡು, ಮಾರುತಿರಾವ ಮೂಳೆ, ಅಮರನಾಥ ಪಾಟೀಲ, ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಿಗಿ, ಅಣವೀರ ಇಂಗಿನಶೆಟ್ಟಿ, ಜಯಶ್ರೀ ಮತ್ತಿಮಡು, ಭಾಗಿರಥಿ ಗುನ್ನಾಪೂರ, ಜ್ಯೋತಿ ಶರ್ಮಾ, ಶಶಿಕಲಾ ಸಜ್ಜನ್, ಸಂಗಮೇಶ ವಾಲಿ, ಕನಕಪ್ಪ ದಂಡಗುಲಕರ, ನಿಂಗಪ್ಪ ಹುಳಗೋಳಕರ, ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ, ಅರುಣ ಪಟ್ಟಣಕರ್, ನಾಗರಾಜ ಮೇಲಗಿರಿ,ಚಂದ್ರಕಾಂತ ಗೊಬ್ಬೂರಕರ್,ಬಸವರಾಜ ಬಿರಾದಾರ, ಅನೀಲ ಬೋರಗಾಂವಕರ್, ಮಹಾದೇವ ಗೊಬ್ಬೂರಕರ್,ರವಿ ರಾಠೋಡ, ದತ್ತಾ ಫಂಡ, ವಿರೇಶ ಬಂದಳ್ಳಿ, ದತ್ತು ಗಂಟಿ, ಬೀಮರಾವ ಸಾಳುಂಕೆ,ಭೀಮಯ್ಯ ಗುತ್ತೆದಾರ, ಸುಭಾಷ ಜಾಪೂರ,ಲಿಂಗರಾಜ ಮಲಕೂಡ, ಶರಣು ಜೇರಟಗಿ, ರಾಜು ಬೆಳಗುಂಪಿ,ಶಿವುಗೌಡ, ಶ್ರೀಶೈಲ ಬೆಳಮಗಿ, ಶಾಂತಕುಮಾರ ಮಾಣಿಕ್, ವಿಜಯಕುಮಾರ ಮಾಣಿಕ್,ಬಸವರಾಜ ತರನಳ್ಳಿ,ರಾಜು ಕುಂಬಾರ, ರಾಜು ಕೋಬಾಳ,ಶಂಕರ ಕುಂಬಾರ, ಸೂರ್ಯಕಾಂತ ವಾರದ,ಯಲ್ಲಪ್ಪ ದಂಡಗುಲಕರ್, ಸಂಜಯ ಸೂಡಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here