ಸುರಪುರ:ಪ್ರೇರಣಾ ಶಾಲೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

0
7

ಸುರಪುರ: ಮಹಿಳೆಯರು ಅಜ್ಞಾನಿಗಳಲ್ಲ ಅರಿವು ಉಳ್ಳವರಾಗಿದ್ದಾರೆ ಇಂದು ಉನ್ನತ ಮಟ್ಟದಲ್ಲಿ ಸಾಧನೆಗೈದಿರುವ ಮಹಿಳೆಯರು ಸಾಕಷ್ಟಿದ್ದಾರೆ ಮಹಿಳೆಯರಲ್ಲಿ ಕೆಲಸ ನಿರ್ವಹಿಸುವ ಆಸಕ್ತಿ ಇದ್ದು ಸ್ವಯಂ ನಿರ್ವಹಣೆಯ ಸಾಮಥ್ರ್ಯ ಹಾಗೂ ಜವಾಬ್ದಾರಿಗಳನ್ನು ನಿರ್ವಹಿಸಲು ಶಕ್ತರಾಗಿದ್ದೇವೆ ಎಂದು ನ್ಯಾಯವಾದಿ ಜಯಲಲಿತಾ ವಿ .ಪಾಟೀಲ ಹೇಳಿದರು.

ನಗರದ ಕುಂಬಾರಪೇಟೆಯ ಪ್ರೇರಣಾ ಕಾನ್ವೆಂಟ್ ಶಾಲೆಯಲ್ಲಿ ಸೌಹಾರ್ದ ಸಮಾಜ ಸೇವಾ ಮತ್ತು ಅಭಿವೃದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ವಿಶ್ವ ಮಹಿಳಾ ದಿನವನ್ನು ಘೋಷಿಸಿರುವ ದಿನ ಮಹಿಳೆಯರಿಗೆ ಇರುವ ಕಾನೂನು ಬದ್ಧ ಹಕ್ಕು ಹಾಗೂ ಸಮಾನತೆಯನ್ನು ಕುರಿತು ಅರಿವು ಮೂಡಿಸಲು ಒಂದು ಅವಕಾಶ ಕಲ್ಪಿಸಿಕೊಟ್ಟಿದೆ ಎಂದ ಅವರು ಆದ್ಯತಾ ಕ್ಷೇತ್ರಗಳನ್ನು ಗುರುತಿಸುವಲ್ಲಿ ಮಹಿಳೆಯರುಕಮ್ಮಿ ಇಲ್ಲ ಮಹಿಳೆಯರಿಗೂ ಅವಕಾಶ ಕೊಡಿ ಅನುಕೂಲತೆಗಳನ್ನು ಕಲ್ಪಿಸಿ ಸರಕಾರಿ ನೌಕರಿ ಸೌಲಭ್ಯಗಳನ್ನು ಒದಗಿಸಬೇಕು ಎಂದ ಅವರು ಹೆಣ್ಣು ಎಂದರೆ ಆಪತ್ತು ಎನ್ನುವ ಜಗತ್ತಿಗೆ ಹೆಣ್ಣಿಂದಲೇ ಸಂಪತ್ತು ಎಂಬ ಭಾವನೆ ಮೂಡಿಸೋಣ ಎಂದರು.

Contact Your\'s Advertisement; 9902492681

ಜಪಮಾತೆ ಮಾತೆ ಚರ್ಚನ ಗುರುಗಳಾದ ಫಾ.ದೀಪಕ್ ಪುರ್ತಾಡೋ ಮಾತನಾಡಿ ಶಿಕ್ಷಣ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ ಆತ್ಮ ವಿಶ್ವಾಸದಿಂದ ನಮ್ಮ ವ್ಯಕ್ತಿತ್ವ ಉತ್ತಮ ಮಟ್ಟದಲ್ಲಿ ಇರುತ್ತದೆ ಶಿಕ್ಷಣವಿಲ್ಲದೇ ಮಹಿಳೆಯರು ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಸಮಖ್ಯಾ ಕರ್ನಾಟಕನ ಸಂಪನ್ಮೂಲ ವ್ಯಕ್ತಿ ಕರುಣಾ ಕುಲಕರ್ಣಿ ಮಾತನಾಡಿ ಮಹಿಳೆಯರು ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಹಾಗೂ ಸಾಮಾಜಿಕವಾಗಿ ಮುಂದುವರೆಯಬೇಕು ಸ್ವಯಂ ಉದ್ಯೋಗಿಗಳಾಗಿ ಕುಟುಂಬದ ಜವಾಬ್ದಾರಿ ನಿರ್ವಹಣೆ ಜೊತೆಗೆ ಮಕ್ಕಳಲ್ಲಿ ಸಂಸ್ಕಾರಯುತ ಒಳ್ಳೆಯ ಗುಣಗಳನ್ನು ಬೆಳೆಸಬೇಕು ಎಂದರು, ಸ್ವ ಸಹಾಯ ಸಂಘಗಳು ಬಾಲ್ಯ ವಿವಾಹ, ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಹಾಗೂ ಇನ್ನೀತರ ಅನಿಷ್ಠ ಪದ್ಧತಿಗಳನ್ನು ನಿರ್ಮೂಲನೆಗೊಳಿಸಲು ಶ್ರಮಿಸಬೇಕು ಎಂದು ಹೇಳಿದರು.

ಪ್ರೇರಣಾ ಕಾನ್ವೆಂಟ್‍ನ ಮುಖ್ಯಸ್ಥೆ ಸಿಸ್ಟರ್ ಅನಿತಾ ಅಧ್ಯಕ್ಷತೆ ವಹಿಸಿದ್ದರು, ಈ ಸಂದರ್ಭದಲ್ಲಿ ಹೊಲಿಗೆ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು, ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ನಗರಸಭೆ ಸದಸ್ಯೆ ಸುವರ್ಣಾ ಸಿದ್ರಾಮ ಎಲಿಗಾರ, ಶಹಾಪುರ ಚರ್ಚನ ಗುರುಗಳಾದ ಫಾ.ಕ್ಲೇವನ್, ಪಾಲನ ಸಮಿತಿ ಸದಸ್ಯೆ ರೀಟಾ ರಾಯಪ್ಪ, ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲೂಸಿ, ಸೌಹಾರ್ದ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಮೇರಿ ಪಿಂಟೋ, ಸಿಸ್ಟರ್ ಪ್ರಿಯಾಂಕಾ, ಶಿಕ್ಷಕಿಯರಾದ ಗಿರಿಜಾ , ಪಾರ್ವತಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here