ಎಸ್‍ಬಿಐ ಬ್ಯಾಂಕ್ ಸಿಬ್ಬಂದಿ ಮೇಲೆ ಕ್ರಮಕ್ಕೆ ವ್ಯವಸ್ಥಾಪಕರಿಗೆ ಡಿಎಸ್‍ಎಸ್ ಮನವಿ

0
14

ಸುರಪುರ:ನಗರದ ರಂಗಂಪೇಟೆಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಡಿಬಿ) ಶಾಖೆಯಲ್ಲಿನ ಇಬ್ಬರು ಅಧಿಕಾರಿಗಳು ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ,ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ಸಂಘಟನೆ ಮುಖಂಡರು ಆರೋಪಿಸಿ ಶಾಖೆಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಸಂಚಾಲಕ ಶಿವಶಂಕರ ಹೊಸ್ಮನಿ,ಇಲ್ಲಿಯ ಶಾಖೆಯಲ್ಲಿನ ಇಬ್ಬರು ಫೀಲ್ಡ್ ಆಫಿಸರ್‍ಗಳು ಬ್ಯಾಂಕ್‍ಗೆ ಬರುವ ರೈತರಿಗೆ ವಿನಾಕಾರಣ ನಿಂದಿಸುವುದು ಮತ್ತು ರೈತರು ತಮ್ಮ ಕೆಲಸ ಮಾಡಿಕೊಡಲು ಕೇಳಿದರೆ ಅಧಿಕಾರಿಗಳಿಗೆ ತೊಂದರೆ ಕೊಡುತ್ತಿದ್ದೀರಿ ಎಂದು ಕೇಸ್ ಮಾಡುವುದಾಗಿ ಹೆದರಿಸುತ್ತಿದ್ದಾರೆ.ಅಲ್ಲದೆ ಈ ಇಬ್ಬರು ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬ್ಯಾಂಕ್‍ಗೆ ಬರುವುದಿಲ್ಲ,ಗ್ರಾಹಕರೊಂದಿಗೆ ವರ್ತನೆಯೂ ಸರಿಯಾಗಿಲ್ಲ,ಆದ್ದರಿಂದ ಇಬ್ಬರು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ತಳವಾರಗೇರ,ದೇವು ಕಕ್ಕೇರಾ,ಬಡವರಾಜ ಬಡಿಗೇರ,ಮಾನಪ್ಪ ಬಡಿಗೇರ,ಶರಣಪ್ಪ ತೆಗ್ಗೆಳ್ಳಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here