ಕಲಬುರಗಿ: ಶ್ರೀ ಶರಣಬಸವೇಶ್ವರ 201 ನೇ ಜಾತ್ರಾ ಮಹೋತ್ಸವಕ್ಕೆ ಕಲಬುರಗಿಗೆ ಆಗಮಿಸುತ್ತಿರುವ ಭಕ್ತಾದಿಗಳಿಗೆ ದಿ.ಅಮಿತ ಪಾಟೀಲ ಸ್ಮರಣಾರ್ಥ ಎಸ್. ಬಿ. ಪಾಟೀಲ ಪರಿವಾರದಿಂದ ನಗರದ ಕಲ್ಯಾಣಿ ಪೆಟ್ರೋಲ್ ಪಂಪ ಹತ್ತಿರ ಅನ್ನ ದಾಸೋಹ ಕಾರ್ಯಕ್ರಮವನ್ನು ಕ್ರೇಡಲ ಅಧ್ಯಕ್ಷ ಚಂದು ಪಾಟೀಲ ಅವರು ಉದ್ಘಾಟಿಸಿ ಪಸಾದ ನಿಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸುಭಾಷ ಬಿಜಾಪುರೆ, ಜಗದಿಶ ಮಾಲು, ಮಲ್ಲಿಕಾರ್ಜುನ ಖೆಮಜಿ, ಶಿವಾನಂದ ಭಂಡಕ, ಮಹೇಶ ಪಟ್ಟಣ, ಉಮೇಶ್ ಪಾಟೀಲ, ಮಲ್ಲಿಕಾರ್ಜುನ ಮಾಂತಗೊಳ, ಅಶೊಕ ಮಾನಕರ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಪಕ್ಷದ ಕಾರ್ಯಕರ್ತರು ಇದ್ದರು.