ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕಂಪಸ ಬಾಕ್ಸ್ ವಿತರಣೆ

0
49

ಕಲಬುರಗಿ: ಕರ್ನಾಟಕ ಸಮಾಜ ಸೇವಾ ಟ್ರಸ್ಟ್ ಹಾಗೂ ಅಮೃತ ಶಾಲ ಮತ್ತು ಖೆಟಿವಾಲ ವತಿಯಿಂದ ನಗರದ ಶಾಹಬಾಜಾರನಲ್ಲಿರುವ ಸರಕಾರಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಕಂಪಸ ಬಾಕ್ಸ್ ವಿತರಣಾ ಕಾರ್ಯಕ್ರಮವನ್ನು ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಮಪ್ರಭು ಪಾಟೀಲ ಅವರು ಉದ್ಘಾಟಿಸಿ ಮಾನತಾಡುತ್ತಾ ವಿದ್ಯಾರ್ಥಿಗಳು ಮುಂದಿನ ಭವಿಷ್ಯ ನಿರ್ಮಾಣದಾತರು ಹಾಗಾಗಿ ಮೂಲ ಶಿಕ್ಷಣ ಮುಖ್ಯ ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವುದರ ಮೂಲಕ ತಮ್ಮ ಜೀವನವನ್ನು ಉಜ್ವಲಗೂಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಸಮಾಜ ಸೇವಾ ಟ್ರಸ್ಟ್‍ನ ರಾಜ್ಯ ಅಧ್ಯಕ್ಷ ಅರಣಕುಮಾರ.ಎಮ್, ಅಮೃತ ಶಾಲ ಖೆಟಿವಾಲ ಸಿ.ಇ.ಓ. ಲಕ್ಷ್ಮಣ.ಕೆ, ಕಾಂಗ್ರೆಸ ಯುವ ಮುಖಂಡರಾದ ಮಹೇಂದ್ರ ನಾಯ್ಡು,ಸಂತೋಷ ಯಾದವ, ಸಂದೀಪ ಯಾದವ, ಕರ್ನಾಟಕ ಸಮಾಜ ಸೇವಾ ಟ್ರಸ್ಟ್ ಜಿಲ್ಲಾಧ್ಯಕ್ಷ ಅಭಿಷೇಕ ದೊಡ್ಡಮನಿ, ಜಿಲ್ಲಾ ಕಾರ್ಯದರ್ಶಿ ಮೈಲಾರಿ ದೊಡ್ಡಮನಿ, ಜಿಲ್ಲಾಗೌರವ ಅಧ್ಯಕ್ಷರಾದ ಮಲ್ಲಿಕಾರ್ಜುನ ದೊಡ್ಡಮನಿ, ಶಾಲೆಯ ಮುಖ್ಯ ಶಿಕ್ಷಕ ಸುಧಾಕರ್ ನಾಯಕ, ಶಾಲೆಯ ಶಿಕ್ಷಕರಾದ ಸೂರ್ಯಕಾಂತ, ಉರಮಿಳಾ ಕುಲಕರ್ಣಿ, ಸುನೀತಾ ದೇಶಪಾಂಡೆ, ವಿಜಯಲಕ್ಷ್ಮಿ ಹಿರೇಮಠ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here