ಪುಸ್ತಕ ಲೋಕಾರ್ಪಣೆ, ಮೂರ್ತಿ ಅನಾವರಣ ಸಮಾರಂಭ ಮುಂದೂಡಿಕೆ

0
9

ಕಲಬುರಗಿ: ಸ್ವಾತಂತ್ರ್ಯ ಹೋರಾಟಗಾರ ಕೆ. ಚನ್ನಬಸಪ್ಪ ಕುಳಗೇರಿ ಅವರ ಚಾರಿತ್ರ್ಯ ಕೃತಿ ಮುದ್ರಣ ಗೊಂಡಿದೆ. ಇಷ್ಟರಲ್ಲಿಯೇ ಐತಿಹಾಸಿಕ ಈ ಕೃತಿ ಲೋಕಾರ್ಪಣೆ ಹಾಗೂ ಕೆ. ಚನ್ನಬಸಪ್ಪ ಕುಳಗೇರಿ ಅವರ ಮೂರ್ತಿ ಅನಾವರಣ ಮಾಡುವ ಕಾರ್ಯಕ್ರಮದ ಸಿದ್ಧತೆಯಲ್ಲಿದ್ದಾಗ ಚುನಾವಣೆ ಹಣಿಕೆ ಹಾಕಿ ಇಷ್ಟರಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ, ಲೋಕಾರ್ಪಣೆಗೋಳ್ಳಲ್ಲಿರುವ ಸಮಾರಂಭಕ್ಕೆ ನಮಗೆ ಬೇಕಾದ ಅತಿಥಿಗಳು ಲಭ್ಯವಾಗುವುದಿಲ್ಲ ಸಮಾರಂಭದಲ್ಲಿ ಪಾಲು ಗೊಳ್ಳಬೇಕಾದ ಕೆ. ಚನ್ನಬಸಪ್ಪ ಕುಳಗೇರಿ ಅವರ ಹಿತೈಷಿಗಳು ಹಾಗೂ ಅಭಿಮಾನಿಗಳಿಗೂ ಗೊಂದಲವಾಗಬಹುದು ಎಂದು ಜೇವರ್ಗಿ ಮತಕ್ಷೇತ್ರದ ಶಾಸಕರು, ವಿರೋದ ಪಕ್ಷದ ಮುಖ್ಯ ಸಚೇತಕರು ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಅಜಯ ಸಿಂಗ್ ಅವರು ಚುನಾವಣೆಯ ಕಣಕ್ಕಿಳಿಯುವುದರಿಂದ ಪುಸ್ತಕ ಲೋಕಾರ್ಪಣೆ, ಮೂರ್ತಿ ಅನಾವರಣ ಸಮಾರಂಭ ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here