ಸುರಪುರ: ತಾಲೂಕಿನ ವಿವಿಧ ಗ್ರಾಮಗಳಿಗೆ ಪ್ರಚಾರಕ್ಕೆ ತೆರಳಿದ್ದ ಶಾಸಕ ರಾಜುಗೌಡ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ತಾಲೂಕಿನ ಸೂಗೂರು,ರುಕ್ಮಾಪುರ,ಹಾಲಗೇರ,ಅಡ್ಡೊಡಗಿ,ಕೋಳಿಹಾಳ ಗ್ರಾಮದ ಜನರು ಪಕ್ಷ ಸೇರ್ಪಡೆಗೊಂಡರು.ಈ ಸಂದರ್ಭದಲ್ಲಿ ಶಾಸಕ ರಾಜುಗೌಡ ಮಾತನಾಡಿ,ತಾವೆಲ್ಲರು ಕ್ಷೇತ್ರದಲ್ಲಿ ಮಾಡಿರುವ ಅಭಿವೃಧ್ಧಿ ಕಾರ್ಯಗಳು ಹಾಗೂ ನಮ್ಮ ಬಿಜೆಪಿ ಸರಕಾರ ನೀಡಿದ ಯೋಜನೆಗಳನ್ನು ಮೆಚ್ಚಿ ಇಂದು ತಾವೆಲ್ಲರು ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜಾ ಹನುಮಪ್ಪ ನಾಯಕ ತಾತಾ,ಯಲ್ಲಪ್ಪ ಕುರಕುಂದಿ,ಮರಿಲಿಂಗಪ್ಪ ಕರ್ನಾಳ,ಸೋಮನಾಥ ಡೊಣ್ಣಿಗೇರ,ದೇವರಾಜ ಮಕಾಶಿ,ಮಾನಪ್ಪ ಸಾಹುಕಾರ ಆಲ್ದಾಳ,ಭೀಮಣ್ಣ ಬೇವಿನಾಳ ಸೇರಿದಂತೆ ಅನೇಕರಿದ್ದರು.