ಕಲಬುರಗಿ; ಕಲಬುರಗಿ ಮಹಾನಗರ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ, ನ್ಯಾಯದಿಗಳಾದ ಶರಣಬಸಪ್ಪ ಕಾಡಾದಿ, ತಾಪಂ ಮಾಜಿ ಸದಸ್ಯ ಬಸವರಜ ಚೋರಗಸ್ತಿ ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಜಿಲ್ಲಾ ಕಾಂಗ್ರೆಸ್ ಘಟಕದ ಅದ್ಯಕ್ಷ ಜಗದೇವ ಗುತ್ತೇದಾರ್, ಕಾಂಗ್ರೆಸ್ ದಕ್ಷಿಣ ಮತಕ್ಷೇತ್ರ ಹುರಿಯಾಳು ಅಲ್ಲಂಪ್ರಭು ಪಾಟೀಲ್ ನೆಲೋಗಿ ಹಾಜರಿದ್ದು ಇಬ್ಬರಿಗೂ ಪಕ್ಷದ ಬಾವುಟ ನೀಡಿ ಸ್ವಾಗತಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರಣಬಸಪ್ಪ ಕಾಡಾದಿ ತಾವು ಕಳೆದ 3 ದಶದಿಂದ ಬಿಜೆಪಿಯಲ್ಲಿದ್ದೆ, ಅಲ್ಲಿ ಪಕ್ಷ ಚೆನ್ನಾಗಿದೆ. ಆದರೆ ಪಕ್ಷವನ್ನು ಸ್ಥಳೀಯ ನಗರ ಹಂತದಲ್ಲಿ ನಡೆಸುವವರು ಸರಿಯಾಗಿಲ್ಲ, ಅವರ ಧೋರಣೆಯಿಂದ ಬೇಸರಗೊಂಡೋ ತಾವು ಕಾಂಗ್ರೆಸ್ ಪಕ್ಷ ಸೇರುತ್ತಿರೋದಾಗಿ ಹೇಳಿದರು.
1995 ರಿಂದಲೂ ಬಿಜೆಪಿಯಲ್ಲಿ ಇದ್ದೆ. ನಗರ ಹಂತದಲ್ಲಿ ಬಿಜೆಪಿ ವ್ಯವಹಾರ ನಡೆಸುವವರ ವರ್ತನೆಯಲ್ಲಿ ಸರ್ವಾಧಿಕಾರಿ ಧೋರಣೆ ಇದೆ. ಅದನ್ನೇ ವಿರೋಧಿಸಿದ್ದರಿಂದ ತಮ್ಮನ್ನು ಮೂಲೆಗುಂಪು ಮಾಲಾಗಿದೆ. ಇದನ್ನೆಲ್ಲ ಖಂಡಿಸಿಯೇ ತಾವು ಕಾಂಗ್ರೆಸ್ ಪಕ್ಷ ಸೇರುತ್ತಿರೋದಾಗಿ ಹೇಳಿದರು. ಇಂದಿನ ಮಟ್ಟಿಗೆ ಹೇಳೋದಾದಲ್ಲಿ ಇಲ್ಲಿನ ಕಾಂಗ್ರೆಸ್ ಹುರಿಯಾಳು ಅಲ್ಲಂಪ್ರಭು ಪಾಟೀಲ್ ಕನಿಷ್ಠ 20 ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಬರುವ ದಿನಗಳಲ್ಲಿ ಕಾಂಗ್ರೆಸ್ ಪರ ಅಲೆ ದಕ್ಷಿಣ ಕ್ಷೇತ್ರದಲ್ಲಿ ಹೆಚ್ಚುತ್ತ ಹೋಗಲಿದೆ ಎಂದರು.