ಕಲಬುರಗಿ: ಮಣಿಪುರದಲ್ಲಿ ನಡೆಯುತ್ತಿರುವ ದಂಗೆಯನ್ನು ಖಂಡಿಸಿದ ಭಾರತೀಯ ಮಹಿಳಾ ಒಕ್ಕೂಟ ಜಿಲ್ಲಾ ಸಮಿತಿಯು, ಮಣಿಪುರದಲ್ಲಿ ಶಾಂತಿ ಸೌಹಾರ್ದತೆ ನೆಲೆಗೊಳಿಸುವಂತೆ, ಹೋರಾಟಗಾರ್ತಿಯರ ವಿರುದ್ಧ ದಾಖಲಾದ ಪ್ರಕರಣಗಳ ವಾಪಸ್ಸಿಗೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯಮಂಡಳಿ ಅಧ್ಯಕ್ಷೆ ಜ್ಯೋತಿ.ಎ, ದಿವ್ಯಾ ಜರಾದಾರ, ಪದ್ಮಾವತಿ ಮಾಲಿ ಪಾಟೀಲ,ಶಿವಲಿಂಗಮ್ಮ ಲೆಂಗಟಿಕರ್ ಸೇರಿದಂತೆ ಹಲವರಿದ್ದರು.