ಕಲಬುರಗಿ: ಮಹಾನಗರ ಪಾಲಿಕೆಯ ಉಪ ಆಯುಕ್ತರ ಕಚೇರಿಯಲ್ಲಿ ಪಾಲಿಕೆಯ ಉಪ ಆಯುಕ್ತರ ಸಮ್ಮುಖದಲ್ಲಿ, ಧನರಾಜ ಹೆಡಗಾಪೂರ ಆರೋಗ್ಯ ಹಾಗೂ ನೈರ್ಮಲ್ಯ ನಿರೀಕ್ಷಕ ಅವಿನಾಶ ಭಾಸ್ಕರ ಮತ್ತು ರಾಜು ಎಂಬುವರಿಂದ ಹಲ್ಲೆ ಮಾಡಿರುವುದು, ಎಂದು ಗುರುವಾರ ಸಮಾಜದ ಸಭೆಯಲ್ಲಿ ನೌಕರನ ಮೇಲೆ ಹಲ್ಲೆ ಮಾಡಿದವರನ್ನು ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲು ಜಿಲ್ಲಾ ವೀರಶೈವ ಸಮಾಜ ಒತ್ತಾಯಿಸಿದೆ.
ಜಿಲ್ಲಾ ಅಧ್ಯಕ್ಷರಾದ ಅರುಣ ಕುಮಾರ ಪಾಟೀಲ , ಕಲ್ಯಾಣಪ್ಪ ಪಾಟೀಲ ಮಳಖೇಡ,ಉಪಾದ್ಯಕ್ಷರು, ಸಂಗಮೇಶ ನಾಗೇನಹಳ್ಳಿ, ಮಂಜು ರೆಡ್ಡಿ , ಶ್ರೀಶೈಲ, ಚಂದ್ರಶೇಖರ ತಳ್ಳಳ್ಳಿ , ರವಿ ಬಿರಾದಾರ,ಶ್ರೀ ಜಗನ್ನಾಥ ಪಟ್ಟಣಶೆಟ್ಟಿ , ಶರಣು ಖಾನಾಪುರ , ಶಿವಪುತ್ರಪ್ಪ ಡೆಂಕಿ, ಮತ್ತಿತರರು ಇದ್ದರು.
ಕ್ರಮಕ್ಕೆ ಒತ್ತಾಯಿಸಿ ಉಗ್ರ ಹೋರಾಟ ಮಾಡಲಾಗುವುದೆಂದು ತಿಳಿಸಿದರು.