ಲಕ್ಷ-ವೃಕ್ಷ ಆಂದೋಲನದಡಿ ಕೇಂದ್ರ ಕಾರಾಗೃಹ ಸಿಬ್ಬಂದಿಗಳಿಗೆ ಸಸಿ ವಿತರಣೆ

0
121

ಕಲಬುರಗಿ: ಗದ್ದಗಿ ಮಠ ಮಕ್ತಂಪೂರ ಕಲಬುರಗಿ ವತಿಯಿಂದ ಲಕ್ಷ-ವೃಕ್ಷ ಆಂದೋಲನ ಕಾರ್ಯಕ್ರಮದಡಿಯಲ್ಲಿ ವಿಜಯ ಮಹಾಂತೇಶ ಶಿವಾಚಾರ್ಯರು ಗದ್ದಗಿ ಮಠ ಮಕ್ತಂಪೂರ ಕಲಬುರಗಿ ರವರ ನೇತೃತ್ವದಲ್ಲಿ ಕೇಂದ್ರ ಕಾರಾಗೃಹ ಕೃಷಿ ಜಮೀನಿನಲ್ಲಿ ಮನುಕುಲದ ಆರೋಗ್ಯದ ದೃಷ್ಟಿಯಿಂದ ಉತ್ತಮ ಆಮ್ಲಜನಕವನ್ನು ನೀಡುವಂತಹ ಸುಮಾರು 50 ಕ್ಕೂ ಹೆಚ್ಚು ಸಸಿಗಳು (ತೆಂಗಿನ, ಹೊಂಗೆ, ಬೇವು), 100 ಬೀಜಗಳ ಚೆಂಡು (Seeಜs ಃಚಿಟಟ) ಗಳನ್ನು ನೆಡಲಾಯಿತು.

ಈ ಕಾರ್ಯಕ್ರಮದಲ್ಲಿ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಪಿ. ರಂಗನಾಥ, ಸಹಾಯಕ ಅಧೀಕ್ಷಕರಾದ ಬಿ. ಸುರೇಶ, ಶಿಕ್ಷಕ ನಾಗರಾಜ ಮುಲಗೆ, ಜೈಲರ್‍ಗಳಾದ ಸೈನಾಜ್ ಎಂ. ನಿಗೇವಾನ್ & ಸಾಗರ ಪಾಟೀಲ್ ರವರು ಹಾಗೂ ಗದ್ದಗಿ ಮಠ ಮಕ್ತಂಪೂರ ರವರ ವತಿಯಿಂದ ಆಗಮಿಸಿದ ಶರಣು ಮತ್ತಿಮೂಡ, ಪ್ರಶಾಂತ ಗುಡ್ಡ & ಲಕ್ಷ್ಮೀಕಾಂತ ಜೊಲ್ಲದ ರವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರಾಗೃಹದ ಕೃಷಿ ಜಮೀನಿನಲ್ಲಿ ಈ ಮೇಲ್ಕಂಡ ಸಸಿಗಳನ್ನು ನೆಡಲು ಶ್ರಮಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here