ಡಾ. ಫ. ಗು.ಹಳಕಟ್ಟಿ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ಶರಣಪ್ಪ ನಾಗಪ್ಪ ಜೇನವೆರಿ ಆಯ್ಕೆ

0
83

ಕಲಬುರಗಿ: ಮಹಾಂತ ನಗರದ್ಲಲಿರುವ ಬಸವ ಮಂಟಪದಲ್ಲಿ ಅಯೋಜಿಸಲಾದ ಸಭೆಯಲ್ಲಿ ಎಲ್ಲಾ ಕಾಯಕ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಮಕ್ಷಮದಲ್ಲಿ ಚರ್ಚಿಸಿ 144 ನೇ, ಜಯಂತಿ ಪ್ರಯುಕ್ತ, ವಚನ ಸಾಹಿತ್ಯ ಪಿತಾಮಹ ಡಾ. ಫ. ಗು.ಹಳಕಟ್ಟಿ ಯವರ ಜಯಂತಿ ಉತ್ಸವ ಸಮಿತಿಗೆ ಅಧ್ಯಕ್ಷರನ್ನಾಗಿ, ಶರಣಪ್ಪ ನಾಗಪ್ಪ ಜೇನವೆರಿ ಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಸರಕಾರದ ವತಿಯಿಂದ ಜರಗುವ 3ನೇ ವರ್ಷದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಕ್ಕೆ ಕಾಯಕ ಶರಣರ ಒಮ್ಮತದಿಂದ ಶರಣಪ್ಪ ಜೆನವೇರಿ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Contact Your\'s Advertisement; 9902492681

ಇವರು ನೇಕಾರ ಸಮುದಾಯದ ಅಭಿವೃದ್ಧಿಗಾಗಿ ಮತ್ತು ಕನ್ನಡ ವಚನ ಸಾಹಿತ್ಯ ಅಕಾಡೆಮಿ ಸ್ಥಾಪನೆ ಗೊಳಿಸಿದ ಸ್ಥಳೀಯ ಸಂಸ್ಥೆಯಾದ ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಟ್ರಸ್ಟ್, ಸಂಸ್ಥಾಪಕ ಅಧ್ಯಕ್ಷರು, ಬ್ರಹ್ಮಪೂರ್ ನಿವಾಸಿಗಳು, KEB ಯಲ್ಲಿ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿ ಕೊನೆಯಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ 2009 ರಲ್ಲಿ ನಿವೃತ್ತಿ ಹೊಂದಿದ್ದಾರೆ.

15 ವರ್ಷಗಳಿಂದ ಅವರು ಮಾಡುತ್ತಿರುವ ಸಾಮಾಜಿಕ ಜಾಗ್ರತಿ ಕಾರ್ಯಗಳು ಮತ್ತು ನೇಕಾರ ಸಮಾಜದ ಮೇಲೆ ಇರುವ ಅವರ ಕಾಳಜಿಯನ್ನು ಅರಿತು ಇಂದು ಅವರಿಗೆ ಫ.ಗು.ಹಳಕಟ್ಟಿ ಯವರ 3 ನೇ ಜಯಂತಿಯ ಉತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ವಕೀಲರಾದ ಶಿವಲಿಂಗಪ್ಪಾ ಅಷ್ಟಗಿ ತಿಳಿಸಿದ್ದಾರೆ.

2022 ರಲ್ಲಿ ಕರ್ನಾಟಕ ಸರಕಾರ ಜಯಂತಿ ಘೋಷಣೆ ಮಾಡಿದಾಗ ನಮ್ಮ ನೈತ್ರುತ್ವದಲ್ಲಿ ಒಂದು ಉತ್ಸವ ಸಮಿತಿ ರಚಿಸಿ ಆಚರಿಸಲಾಯಿತು, 2023 ರಲ್ಲಿ ಪ್ರಗತಿಪರ ಖ್ಯಾತ ಲೇಖಕರಾದ ಸೂರ್ಯಕಾಂತ ಸೊನ್ನದ ರವರ ಮಾರ್ಗದರ್ಶನ ದಲ್ಲಿ ಹಮ್ಮಿಕೊಂಡು ಆಚರಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here