ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ಅಲ್ಪ ಸಂಖ್ಯಾತರ ನೌಕರರ ಸಂಘದ ವತಿಯಿಂದ ಅಂಜುಮನ್ ತರಖಿ ಉರ್ದು ಹಿಂದ ಶಾಖೆಗೆ ನೂತನವಾಗಿ ಅಧ್ಯಕ್ಷರಾಗಿ ಡಾ: ಅಕ್ರಮ ನಖಾಶ, ಉಪಾಧ್ಯಕ್ಷರಾಗಿ ಡಾ: ಇಫ್ತೆಖಾರೊದ್ದಿನ್, ಡಾ: ನಾಸಿಬ್ ಖುರೇಶಿ, ಕಾರ್ಯದರ್ಶಿಯಾಗಿ ಡಾ: ಮಾಜಿದ ದಾಗಿ, ಖಜಾಂಚಿಯಾಗಿ ಮಹುಮ್ಮದ ಸಲಾಹೊದ್ದಿನ್, ಅಮ್ಜದ ಜಾವೆದ್, ಡಾ: ರಸ್ತುಮ ಫೈಜಿ, ವಲಿ ಅಹ್ಮದ ಮತ್ತು ಡಾ: ರಫೀಖ್ ರಹೆಬರ್ ಇವರಿಗೆ ಸನ್ಮಾನಿಸಲಾಯಿತು.
ಅಜೀಜುಲ್ಲಾ ಸರ್ಮಸ್ಥ ಹಿರಿಯ ಉರ್ದು ಪತ್ರಕರ್ತರು ಇವರಿಗೆ ಡಾ: ಅಕ್ರಮ ನಖಾಶ ಅಧ್ಯಕ್ಷರು ವಿಶೇಶವಾಗಿ ಸನ್ಮಾನಿಸಿದರು. ಹೊಸದಾಗಿ ಚುನಾಯಿತರಾದ ಸದಸ್ಯರಿಗೆ ಉರ್ದು ಭಾಷೆ ಕುರಿತು ಅದಕ್ಕೆ ಸಂಬಂಧಿಸಿದಂತೆ ಉಳಿಸುವ ಅಂಚಿನಲ್ಲಿ ಮತ್ತು ಉರ್ದು ಭಾಷೆಯಲ್ಲಿ ಓದುತ್ತಿರುವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪೆÇ್ರೀತ್ಸಾಹ ಕೊರಿತು ಅವರ ಕಲಿಕೆ ಬಗ್ಗೆ ನಿಗಾ ವಹಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಕಿವಿ ಮಾತು ಹೇಳಲಾಯಿತು. ಅದರಂತೆ ಅಧ್ಯಕ್ಷರು ಅಂಜುಮನ್ ತರಖಿ ಉರ್ದು ಹಿಂದ ರವರು ಕೂಡ ನಮ್ಮ ಸಲಹೆಗೆ ಒಪ್ಪಿ ಮುಂದಿನ ದಿನಗಳಲ್ಲಿ ರೂಪ ರೇಷೆಗಳನ್ನು ತಯ್ಯಾರಿಸಿ ಒಳ್ಳೆ ರೀತಿಯಲ್ಲಿ ಕೆಲಸ ಮಾಡಲಾಗುವದೆಂದು ಹೇಳಿದರು.
ಸದರಿ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಸೈಯ್ಯದ ನಜೀರೊದ್ದಿನ್ ಮುತವಲ್ಲಿ, ಪ್ರದಾನ ಕಾರ್ಯದರ್ಶಿಯಾದ ಎಸ್.ಎಂ.ಜಾಗೀರದಾರ, ಕಾರ್ಯದರ್ಶಿ ನವಾಬ ಖಾನ್, ಜಂಟಿ ಕಾರ್ಯದರ್ಶಿ ಅಬ್ದುಲ್ ಖದೀರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಮುಜೀಬ್ ಅಲಿ ಖಾನ್ ಮತ್ತು ಮಂಜೂರ ವಿಖಾರ್ ಹಾಜರಿದ್ದರು.
ನವಾಬ ಖಾನ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಮತ್ತು ಮಂಜೂರ ವಿಖಾರ ರವರ ಆಭಾರ ಮಂಡಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.