ಕಲಬುರಗಿ: ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಅಭಿಯಾನದ ಪ್ರಯುಕ್ತ ಮಹಾನಗರ ಪಾಲಿಕೆಯ ಆಯುಕ್ತರ ಆದೇಶದ ಮೇರೆಗೆ ನಗರದ ಎಲ್ಲಾ ಕಡೆ ಏಕಾಏಕಿ ಪಾಲಿಕೆಯ ಸಿಬ್ಬಂದಿಗಳು ಪ್ಲಾಸ್ಟಿಕ್ ಸಂಗ್ರಹಿಸುವ ಮಾರುವ ಸ್ಥಳಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ಅನ್ನು ಜಪ್ತಿ ಮಾಡಲಾಯಿತು.
ಮಾರ್ಕೆಟ್ನಲ್ಲಿ ಸುಮಾರು 900 ರಷ್ಟು ಪ್ಲಾಸ್ಟಿಕ್ ಅನ್ನು ಚಪ್ತಿ ಮಾಡಿ 52 ಸಾವಿರ ರೂಪಾಯಿ ಅಷ್ಟು ದಂಡ ವಿಧಿಸಲಾಗಿರುತ್ತದೆ. ಜೊತೆಗೆ ಮಹಾನಗರ ಪಾಲಿಕೆ ಇವತ್ತಿಂದ ಜಿಲ್ಲೆಯ ಎಲ್ಲಾ ನಾಗರಿಕರಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳುವುದೇನೆಂದರೆ ಎಲ್ಲರೂ ಏಕ ಬಳಕೆ ಪ್ಲಾಸ್ಟಿಕ್ ಅನ್ನು ಬಳಸುವುದು ನಿಲ್ಲಿಸಿ ನಮ್ಮ ಪ್ರಕೃತಿ ಮತ್ತು ಪರಿಸರವನ್ನು ರಕ್ಷಿಸರಲು ಎಲ್ಲರೂ ಕೈಜೋಡಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.
ಈ ಕಾರ್ಯ ಚಟುವಟಿಕೆಯಲ್ಲಿ ಪರಿಸರ ಅಭಿಯಂತರ ಬಾಬು ಮೇಲಕೆರಿ, ಆರೋಗ್ಯ ನಿರೀಕ್ಷಕರಾದ ರಾಜು ಕಟ್ಟಿಮನಿ, ಶರಣಕುಮಾರ್, ದೀಪಕ್ ಚವ್ಹಾಣ, ಮಲ್ಲಿಕಾರ್ಜುನ್, ಅವಿನಾಶಕುಮಾರ್, ಅರುಣಕುಮಾರ್ ಧನಶೆಟ್ಟಿ ಇತರರು ಇದ್ದರು.