ಸುರಪುರ: ಮಕ್ಕಳಿಗೆ ಪೌಷ್ಠಿಕಯುಕ್ತ ಆಹಾರ ತುಂಬಾ ಮುಖ್ಯವಾಗಿದೆ.ಇದರಿಂದ ಮಕ್ಕಳಿಗೆ ಉತ್ತಮ ಆರೋಗ್ಯ ಲಭಿಸುತ್ತದೆ ಎಂದು ಮಾಜಿ.ಗ್ರಾ.ಪಂ ಅಧ್ಯಕ್ಷ ಧರ್ಮರಾಜ ಬಡಿಗೇರ ಮಾತನಾಡಿದರು.
ನಗರದ ಹಸನಾಪುರ ವಲಯದ ರಾಷ್ಟ್ರೀಯ ಪೋಷಣ ಮಾಸಾಚರಣೆ ಅಂಗವಾಗಿ ಡಾ:ಬಾಬು ಜಗಜೀವನರಾಮ್ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಮಕ್ಕಳಲ್ಲಿ ಗರ್ಭೀಣಿ ಮಹಿಳೆಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ಪೌಷ್ಠಿಕಯುಕ್ತ ಆಹಾರ ಮುಖ್ಯವಾಗಿದೆ ಎಂದರು.ಅಂಗನವಾಡಿ ಕೇಂದ್ರಗಳು ಮಕ್ಕಳು ಮತ್ತು ತಾಯಂದಿರಿಗೆ ತವರು ಮನೆ ಇದ್ದಂತೆ,ಸರಕಾರ ಮಗು ಮತ್ತು ತಾಯಂದಿರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಹಿಳಾ ಮೇಲ್ವಿಚಾರಕಿ ಪದ್ಮಾವತಿ ನಾಯಕ ಅವರು ಮಾತನಾಡಿದರು.ಮುಖ್ಯ ಅತಿಥಿಗಳಾಗಿ ನಗರಸಭೆ ಸದಸ್ಯೆ ಲಕ್ಷ್ಮೀ ಎಮ್.ಬಿಲ್ಲವ್,ಮಹಿಳಾ ಮೇಲ್ವಿಚಾರಕಿಯರಾದ ಚಂದ್ರಲೀಲಾ ಬಿಲ್ಲವ್,ಜಯಶ್ರೀ ಪಾಟೀಲ್,ಶಶಿಕಲಾ ಗಾಳಿ,ಸತ್ಯಮ್ಮ ಉಪಸ್ಥಿತರಿದ್ದರು.ಮತ್ತೋರ್ವ ಮಹಿಳಾ ಮೇಲ್ವಿಚಾರಕಿ ಸಾವಿತ್ರಿ ಗಾಳಿ ಕಾಯಕ್ರಮ ನಿರೂಪಿಸಿದರು,ತಿಪ್ಪಮ್ಮ ಸ್ವಾಗತಿಸಿ,ವಂದಿಸಿದರು.ಅನೇಕ ಜನ ಅಂಗನವಾಡಿ ಕಾರ್ಯಕರ್ತೆಯರು,ಸಹಾಯಕಿಯರು ಸೇರಿದಂತೆ ತಾಯಂದಿರು ಮತ್ತು ಮಕ್ಕಳು ಭಾಗವಹಿಸಿದ್ದರು.