ಸುರಪುರ: ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೊಂಕು ತಗುಲಿರುವ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಠಾಣೆಗೆ ಮುಂಜಾಗ್ರತೆಗಾಗಿ ಸೋಡಿಯಂ ಕ್ಲೋರೈಡ್ ಸಿಂಪಡಿಸಲಾಯಿತು.
ಈಗಾಗಲೆ ಪೊಲೀಸ್ ಠಾಣೆ ಮುಂದೆ ಸ್ಯಾನಿಟೈಜರ್ ಹಾಗು ಕೈ ತೊಳೆಯಲು ದ್ರವ ಮತ್ತು ನೀರನ್ನು ಸದಾಕಾಲ ಠಾಣೆಯ ಮುಂದೆ ಇಡಲಾಗಿತ್ತು.ಈಗ ಪೌರಾಡಳಿತ ಇಲಾಖೆಯ ನಿರ್ದೇಶನದ ಮೇರೆಗೆ ಪೊಲೀಸ್ ಠಾಣೆಗೆ ಸ್ಯಾನಿಟೈಜ್ ಮಾಡಲಾಗುತ್ತಿದೆ.ಬೆಳಿಗ್ಗೆ ನಗರಸಭೆಯ ಸಿಬ್ಬಂದಿ ಸೋಡಿಯಂ ಕ್ಲೋರೈಡ್ ಟ್ಯಾಂಕ್ಹೊತ್ತ ಟ್ರ್ಯಾಕ್ಟರ್ನೊಂದಿಗೆ ಆಗಮಿಸಿ ಇಡೀ ಠಾಣೆಗೆ ದ್ರಾವಣ ಸಿಂಪಡಿಸಿದರು.
ನಿತ್ಯವು ಠಾಣೆಗೆ ಅನೇಕ ಜನರು ಬಂದು ಹೋಗುತ್ತಾರೆ.ಅಲ್ಲದೆ ಠಾಣೆಯ ಸಿಬ್ಬಂದಿ ಕೂಡ ಕರ್ತವ್ಯದ ಮೇಲೆ ಹೊರಗೆ ಬರುತ್ತಾರೆ.ಇದರಿಂದ ಯಾರಿಗೆ ಸೊಂಕು ತಗುಲಿರಲಿದೆ ಎಂಬುದು ತಿಳಿಯದ ಸಂಗತಿಯಾದ್ದರಿಂದ ಪೌರಾಡಳಿತ ಇಲಾಖೆ ಮುಂಜಾಗ್ರತೆಗಾಗಿ ಕ್ರಮ ಕೈಗೊಂಡಿದ್ದು ಪೊಲೀಸ್ ಠಾಣೆಗೆ ಸೋಡಿಯಂ ಕ್ಲೋರೈಡ್ ಸಿಂಪಡಣೆಗೆ ಕ್ರಮ ಕೈಗೊಂಡಿದ್ದಾಗಿ ಹೇಳಲಾಗುತ್ತಿದೆ.