ಕಲಬುರಗಿ: ಇತ್ತೀಚೆಗೆ ಸರ್ಕಾರ ಘೋಷಣೆಗೆ ಮಾಡಿದ ಕಾಳಗಿ, ಕಮಲಾಪುರ,ಯಡ್ರಾಮಿ ಹೀಗೆ ಹೊಸ ತಾಲ್ಲೂಕುಗಳಲ್ಲಿ ಅತಿ ಶೀಘ್ರದಲ್ಲಿ ಕೃಷಿಕ ಸಮಾಜ ರಚನೆ ಮಾಡಿ, ಕೇಂದ್ರ, ರಾಜ್ಯ ಸರ್ಕಾರದಿಂದ ರೈತರ ಅಭಿವೃದ್ಧಿಗಾಗಿ ಘೋಷಣೆ ಮಾಡಿದ ಲಾಕ್ ಡೌನ್ ಯೋಜನೆ ರೈತರಿಗೆ ತಲುಪಿಸಲು ಚಿತ್ತಾಪುರ ತಾಲೂಕಿನ ಕೃಷಿಕ ಸಮಾಜ ಸದಸ್ಯ ಹಾಗೂ ವಕೀಲರಾಗಿ ಶಿವರಾಜ ಅಂಡಗಿ ಒತ್ತಾಯಿಸಿದರು.
ಜಿಲ್ಲಾ ಕೃಷಿಕ ಸಮಾಜದ ಅದ್ಯಕ್ಷ ಸಿದ್ರಾಮಪ್ಪ ಧಂಗಾಪುರ ಅವರ ಜನ್ಮದಿನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೃಷಿಕ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾದೆ. ರಾಷ್ಟ್ರೀಯ ಕೃಷಿಕ ಸಮಾಜದ ಗವರ್ನಿಂಗ್ ಬಾಡಿ ಸದಸ್ಯರಾಗಿ, ರಾಜ್ಯ ಕೃಷಿಕ ಸಮಾಜ ಉಪಾಧ್ಯಕ್ಷರಾಗಿ, ಅನೇಕ ವರ್ಷಗಳಿಂದ ಕಲಬುರಗಿ ಜಿಲ್ಲೆಯ ಕೃಷಿಕ ಸಮಾಜದ ಅಧ್ಯಕ್ಷರಾಗಿ ರಾಷ್ಟ್ರ ಮಟ್ಟದ ಅನೇಕ ವಿಚಾರ ಸಂಕಿರಣಗಳನ್ನು ಏರ್ಪಡಿಸಿಸುವುದರೊ೦ದಿಗೆ ಅನೇಕ ಹೊರಾಟಗಳನ್ನು ಮಾಡ್ಡಿದಿರಿ ಅವುಗಳ ಪ್ರತಿಫಲವಾಗಿ ಕಲಬುರಗಿಯಲ್ಲಿ ತೊಗರಿ ಮಂಡಳಿ ಸ್ಥಾಪನೆಯಾಯಿತು ನಂತರ ಕೃಷಿ ಮಹಾವಿದ್ಯಾಲಯ ಪ್ರಾರಂಭಿಸಲು ಹೊರಾಟ ಮಾಡಿ ಅದರಲ್ಲೂ ಯಶಸ್ವಿಯಾದ ಶ್ರಮ ಮೆಚ್ಚುವಂತದಾಗಿದೆ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ವಿನೊದ ಕುಮಾರ ಜನೆವರಿ, ಡಾ.ಆನಂದ ಪಾಟೀಲ ಉಪಸ್ಥಿತರಿದ್ದರು