ಕಮಲಾಪುರ: ಚೀನಾ ವಸ್ತುಗಳನ್ನು ದೇಶದಿಂದ ಬಹಿಷ್ಕರಿಸಬೇಕು ಎಂದು ಆಗ್ರಹಿಸಿ ಇಂದು ಶ್ರೀ ರಾಮ ಸೇನಾ ತಾಲ್ಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಗ್ರಹಿಸಿದರು. ಇದೇ ವೇಳೆಗೆ ಗಡಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ರಾಮ ಸೇನೆ ಕಮಲಾಪುರ ತಾಲೂಕ ಅಧ್ಯಕ್ಷ ಶಂಕರ ನಾಯಿಕೋಡಿ , ಉಪಾಧ್ಯಕ್ಷ ಮಂಜುನಾಥ ಜಮಾದಾರ,ಕೋಲಿ ಸಮಾಜದ ಜಿಲ್ಲಾ ಮುಖಂಡ ಶಿವು ಮುಕರಂಬಿ, ಸೇನೆಯ ರಟಕಲ್ ಅಧ್ಯಕ್ಷ ರಾಜಶೇಖರ ಹಂದ್ರೋಳ್ಳಿ, ಉಪಾಧ್ಯಕ್ಷರ ಶಂಕರ ಚೋಕಾ, ಗುಂಡು ಗುತ್ತಿಗೆದಾರ, ವಿಶಾಲ ಹಾಗೂ ಕಮಲಾಪುರ ಹರಕಂಚಿ ಗ್ರಾಮಸ್ಥರು ಇದ್ದರು.