ಸುರಪುರ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಗೆ ಇಂದು ನೂತನವಾಗಿ ಅಧಿಕಾರೇತರ ನಾಮ ನಿರ್ದೇಶಕರನ್ನು ನೇಮಕಗೊಳಿಸಲಾಗಿದೆ.
ರಾಜ್ಯದಲ್ಲಿ ಒಟ್ಟು ಮೂರು ಜನರನ್ನು ನಾಮ ನಿರ್ದೇಶನಗೊಳಿಸಲಾಗಿದ್ದು ಅದರಲ್ಲಿ ಹುಣಸಗಿ ತಾಲೂಕಿನ ಜೋಗುಂಡಬಾವಿಯ ಮುಖಂಡ ಅಮರಣ್ಣ ಹುಡೇದ್ ಅವರನ್ನು ನಾಮನಿರ್ದೇಶನಗೊಳಿಸಲಾಗಿದೆ.
ಈ ಕುರಿತು ಸರಕಾರದ ನಗರಾಭಿವೃಧ್ಧಿ ಇಲಾಖೆಯ ಕಾರ್ಯದರ್ಶಿಯವರು ನೇಮಕಾತಿ ಘೋಷಿಸಿದ್ದು ಅಮರಣ್ಣ ಹುಡೇದ್ ಅವರನ್ನು ಅಧಿಕಾರೇತರ ನಿರ್ದೇಶಕರನ್ನಾಗಿ ನಾಮ ನಿರ್ದೇಶನಗೊಳಿಸಿ ಆದೇಶ ಹೊರಡಿಸಿದ್ದಾರೆ.