ಸುರಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವೀರಶೈವ ಲಿಂಗಾಯತ ಅಭೀವೃಧ್ಧಿ ನಿಗಮ ಘೋಷಣೆಗೆ ಹುಣಸಗಿ ಪಟ್ಟಣದಲ್ಲಿ ವೀರಶೈವ ಲಿಂಗಾಯತ ಸಮುದಾಯದ ವತಿಯಿಂದ ಹರ್ಷಾಚರಣೆ ನಡೆಸಲಾಯಿತು.
ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ಬೈಕ್ ರ್ಯಾಲಿ ನಡೆಸುವ ಮೂಲಕ ಸಂಭ್ರಮಾಚರಿಸಿದರು.ಅಲ್ಲದೆ ಬಸವೇಶ್ವರರ ಪುತ್ಥಳಿಗೆ ಹಾಗು ಮಹಾಂತಸ್ವಾಮಿ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಗುಲಾಲು ಎರಚಿ ಸಿಹಿ ಹಂಚಿ ಸಂಭ್ರಮಾಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಆರ್.ಎಮ್.ರೇವಡಿ ಡಾ: ಬಸನಗೌಡ ಪಾಟೀಲ್ ಮಂಜುನಾಥ ಬಳಿ ರಮೇಶ ವಾಲಿ ಹೊನ್ನಕೇಶವ ದೇಸಾಯಿ ಅನಿಲ್ ಬಳಿ ಸಿದ್ದನಗೌಡ ಬಿರಾದಾರ್ ರಾಜು ಮಲಗಲದಿನ್ನಿ ಸಂಗನಗೌಡ ಧನರಡ್ಡಿ ಪ್ರಕಾಶ ಪಟ್ಟಣಶೆಟ್ಟಿ ಮುತ್ತು ಜಂಬಲದಿನ್ನಿ ರಾಜೇಶಕುಮಾರ ಪಾಟೀಲ್ ಕಾಶಿನಾಥಗೌಡ ಕರೆಕಲ್ ಬಸವರಾಜ ಆಲ್ಹಾಳ ಶ್ರೀಶೈಲ್ ವೈಲಿ ಆನಂದ ಬಾರಿಗಿಡದ ಮುದಕಪ್ಪ ಬೂದಿಹಾಳ ಬಸವರಾಜ ಬಳಿ ಸೇರಿದಂತೆ ಅನೇಕರಿದ್ದರು.