ಕರವೇ ಅಧ್ಯಕ್ಷರಾಗಿ ಆನಂದ ತೆಗನೂರ ನೇಮಕ

0
43

ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣದ)  ಜಿಲ್ಲಾ ಅಧ್ಯಕ್ಷರಾಗಿ ಆನಂದ ತೆಗನೂರ ರವರನ್ನು ನೇಮಕ ಮಾಡಿ ಸಂಘಟನೆಯ ರಾಜ್ಯ ಸಂಸ್ಥಾಪಕರಾದ ಬಿ.ಎಸ್ ಚಂದ್ರಶೇಖರ ರವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಸಂಘಟನೆಯನ್ನು ಸಂಘಟಿಸಿ  ಬಲಪಡಿಸುವ ದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಹಂತದ ಪದಾಧಿಕಾರಿಗಳನ್ನು  ನೇಮಕ ಮಾಡುವ ಜವಾಬ್ದಾರಿಯನ್ನು ವಹಿಸಲಾಗಿದೆ.

Contact Your\'s Advertisement; 9902492681

ನಾಡು-ನುಡಿ, ನೆಲ,-ಜಲ, ಭಾಷೆ – ಸಂಸ್ಕೃತಿ ಪರಂಪರೆಗೆ ಸಂಬಂಧಿಸಿದಂತೆ ಹಾಗೂ ಜಿಲ್ಲೆಯ ಜನರ ಕಾರ್ಮಿಕರ ಹಾಗೂ ಶೋಷಿತ ವರ್ಗಗಳ ಕುಂದುಕೊರತೆಗಳ ಪರವಾಗಿ ಧ್ವನಿ ಎತ್ತಿ ಹೋರಾಡಿ ಎಲ್ಲಾ ವರ್ಗಕ್ಕೂ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವ ಮೂಲಕ ಸಂಘಟನೆಯ ಧ್ಯೇಯೋದ್ಯೇಶಗಳನ್ನು ಎತ್ತಿ ಹಿಡಿಯಲು ಶ್ರಮಿಸುವಂತೆ ಸೂಚಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here