ಕಲಬುರಗಿ: ಸಂವಿಧಾನ ದಿನಾಚರಣೆ ಅಂಗವಾಗಿ ಇಂದು ಭಾರತ ರತ್ನ,ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ ಪುತ್ಥಳಿಗೆ ಬಿಜೆಪಿ ಯುವ ಮೋರ್ಚಾ ಕಲಬುರಗಿ ವತಿಯಿಂದ ಗೌರವ ನಮನ ಸಲ್ಲಿಸಿ, ಮಾತನಾಡಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ, ಪ್ರತಿಯೊಬ್ಬ ಭಾರತೀಯ ತನ್ನ ಮೂಲಭೂತ ಕರ್ತವ್ಯ ಮತ್ತು ಮೂಲಭೂತ ಹಕ್ಕುಗಳನ್ನು ತಿಳಿದುಕೊಂಡು ಅವುಗಳ ಪಾಲನೆ ಮಾಡಿದರೆ ನಮ್ಮ ಸಂವಿಧಾನಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ.
ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರಗಳಲ್ಲಿಯೆ ಶ್ರೇಷ್ಠ ಮತ್ತು ದೊಡ್ಡದಾದ ಸಂವಿಧಾನ ನಮ್ಮದಾಗಿದೆ. ನಮ್ಮ ಸಂವಿಧಾನವು ಆಧುನಿಕ ಧರ್ಮಗ್ರಂಥವಾಗಿದ್ದು,ಇದರ ಅನುಕರಣೆ ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಲಿದೆ ಎಂದು ಶಿವ ಅಷ್ಠಗಿ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ರಾಹುಲ್ ಬಬಲಾದ, ಮದನ ಯಾಗಾಪುರ್, ಕಾರ್ಯಕಾರಿಣಿ ಸದಸ್ಯ ಮೇಘರಾಜ್ ಅರಳಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಾಳಾದ ರವಿಚಂದ್ರ ಸಿಂಗೆ ಕುಮಸಿ, ಬಾಬುರಾಯ ವೈಜಾಪುರ್ ಕೌವಲಗಾ, ಯುವ ಮೋರ್ಚಾದ ಶರಣು ಕಿಣಗಿ, ಶರಣು ಬೆನಕನಳ್ಳಿ, ಶಶಿಧರ್ ಮರನೂರ್ ಇದ್ದರು.