ಕಲಬುರಗಿ : ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಶಿವಾನಂದ ಹೊನಗುಂಟಿ ನೇತೃತ್ವದಲ್ಲಿ ಜಿಮ್ಸ್ ಆಸ್ಪತ್ರೆ ಹಾಗೂ ವಿವಿಧ ಬಡಾವಣೆಯಲ್ಲಿ ಇರುವ ಬಡವರು ಮತ್ತು ನಿರ್ಗತಿಕರಿಗೆ ೭ನೇ ದಿನದ ಅನ್ನಸಂತರ್ಪಣೆ ಹಾಗೂ ಬಿಸಲೇರಿ ನೀರನ್ನು ಶಾಸಕಿ ಖನಿಜ್ ಫಾತಿಮಾ ಅವರು ವಿತರಿಸುವ ಮೂಲಕ ಚಾಲನೆ ನೀಡಿದರು.
ಮುಖಂಡರಾದ ಮಜರಆಲ್ಂ ಖಾನ್, ಆದಿಲ್ ಸುಲೇಮಾನ ಶೇಠ, ಶರಣು ಗೋಧಿ, ಓಯಾಜ್ ಶೇಖ, ಪ್ರಕಾಶ ಕಪನೂರ, ಅಶ್ವಿನ್ ಸಂಕಾ, ಪರಶುರಾಮ ನಟೇಕಾರ್, ಕುಸರೋ ಜಾಗಿರದಾರ, ಹರ್ಷದ್ ಖಾನ್, ಉದಯ ಕುಲಕರ್ಣಿ, ಕಾಂತು ಒಂಟಿ, ಸಿದ್ದಾರ್ಥ ಸಂಕಾ ಇದ್ದರು.