ಕಲಬುರಗಿ: ವಿ ಕೆ ಸಲಗರ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಜಿ ಎಸ್ ಮಾಲಿ ಪಾಟೀಲ ಇಂದು ಸೇವಾ ವೃತ್ತಿಯಿಂದ ನಿವೃತ್ತರಾದ ನಿಮಿತ್ತ ಕಾಲೇಜಿನ ಪ್ರಾಚಾರ್ಯರಾದ ಪ್ರಭಾಕರ್ ಸುಲೇಪೇಟ ಗೌರವಿಸಿ ಪಾಟೀಲರ ಸೇವೆ ನೆನಪಿಸಿಕೊಂಡರು.
ಮಕ್ಕಳ ವಿಧ್ಯಾಭ್ಯಾಸ ಹಾಗೂ ಫಲಿತಾಂಶ ಕಡೆ ಹೆಚ್ಚು ಗಮನ ಕೊಟ್ಟು ಕಾಲೇಜಿನ ಏಳಿಗೆಗಾಗಿ ದುಡಿಯುತಿದ್ದರು ಎಂದು ಹೇಳಿದ್ದರು.
ಇದೆ ಸಂದರ್ಭದಲ್ಲಿ ಕಲಬುರಗಿ ಪದವಿ ಪೂರ್ವ ಕಾಲೇಜು ಉಪನಿರ್ದೇಶಕರಾದ ಶಿವಶರಣಪ್ಪ ಮೂಳೆ ಗಾಂವ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಜಿ ಎಸ್ ಮಾಲಿ ಪಾಟೀಲರು ವೃತ್ತಿ ಸೇವೆ ಸಂದರ್ಭದಲ್ಲಿ ಸಮಯ ಪ್ರಜ್ಞೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದರು ಎಂದು ಹೇಳಿದ್ದರು. ಕಾಲೇಜಿನ ಉಪನ್ಯಾಸಕ ಡಾ.ಅಜೀಜಸಾಬ ಮಾತನಾಡಿ ಪಾಟೀಲರು ಕಾಲೇಜಿನಲ್ಲಿ ಅಚ್ಚುಮೆಚ್ಚಿನ ಉಪನ್ಯಾಸಕರಾಗಿದ್ದರು ಎಂದು ನುಡಿದರು.
ಸಾಹಿತಿ ಬಿ ಎಚ್ ನಿರಗುಡಿ ಅವರು ಮಾತನಾಡುತ್ತಾ ಪಾಟೀಲರಿಗೆ ಮಕ್ಕಳಿಗೆಪಾಠ ಮಾಡುವದು ಎಂದರೆ ಎಲ್ಲಿಲ್ಲದ ಖುಷಿ ಎನ್ನುತಿದ್ದರು .ಇವರು ಸುಮಾರು 30ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದುತ್ತಿದ್ದಾರೆ.
ಇವರ ಮುಂದಿನ ಜೀವನ ಸುಖ, ಶಾಂತಿ ಹಾಗೂ ನೆಮ್ಮದಿಯಿಂದ ಬಾಳಲಿ ಎಂದು ಹಾರೈಸಿದರು. ಕಾಲೇಜೀನ ಉಪನ್ಯಾಸಕರಾದ ಶಿವಶರಣಪ್ಪ ಗುಬ್ಬನ,ಮಾಲೇಶ,ರಾಜು ಉಪಸ್ಥಿತರಿದ್ದರು.