ಕಾರ್ಮಿಕರಿಗೆ ಪಡಿತರ ಕಿಟ್ ವಿತರಣೆ

0
46

ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕದಿರೇನಹಳ್ಳಿ ಯಲ್ಲಿ ಅಸಂಘಟಿತ ಕಾರ್ಮಿಕರ ಸೇವಾ ಕೇಂದ್ರ ಮತ್ತು ಕಾರ್ಮಿಕ ಸೇವಾ ಕೇಂದ್ರ ಆಕಾಂಕ್ಷ ಸಹಯೋಗದಲ್ಲಿ ಕಟ್ಟಡ ಕಾರ್ಮಿಕರು ಹಾಗೂ ಪೇಂಟರ್ ಗಳಿಗೆ ದಿನಸಿ ಕಿಟ್ ಮತ್ತು ನಿರ್ಮಾಣ ಕಾಮಗಾರಿ ಸಲಕರಣೆಗಳನ್ನು ಕಂದಾಯ ಸಚಿವ ಆರ್. ಅಶೋಕ ವಿತರಿಸಿದರು.

ಈ ವೇಳೆ ಮಾತನಾಡಿದ ಅವರು, ಕೋವಿಡ್ ನಿಂದಾಗಿ ಹಲವು ವಲಯಗಳು ತೊಂದರೆಗೆ ಸಿಲುಕಿದಂತೆ ಕಟ್ಟಡ ಕಾರ್ಮಿಕರು ಕೂಡಾ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಅವರಿಗೂ ಕೂಡಾ ನೆರವಿನ ಅಗತ್ಯವಿದ್ದೂ ಆ ನಿಟ್ಟಿನಲ್ಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘವು ಉತ್ತಮ ಕಾರ್ಯ ನಿರ್ವಹಿಸಿದೆ ಎಂದು ಹೇಳಿದರು, ಕಾರ್ಮಿಕರ ಸೇವಾ ಕೇಂದ್ರದ ಅಧ್ಯಕ್ಷ ಟಿ ವಿಜಯ್ ಮತ್ತು ಬೆಂಗಳೂರು ದಕ್ಷಿಣ ಕಾರ್ಮಿಕ ಅಧಿಕಾರಿ ಕೆ.ಜಿ.ಮುಕುಂದ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here