ಕಲಬುರಗಿ: ನಗರದ ಟೌನ್ ಹಾಲ್ನಲ್ಲಿರುವ ಮಾಜಿ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಅವರ ಪ್ರತಿಮೆಗೆ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಡಿ.ಎಂ.ಎಸ್.ಎಸ್ ರಾಜ್ಯಾಧ್ಯಕ್ಷ ಲಿಂಗರಾಜ ತಾರಫೈಲ್, ಪರಮೇಶ್ವರ ಖಾನಾಪೂರ, ರಾಜು ವಾಡೇಕಾರ, ಶಿವಾನಂದ, ಬಸವರಾಜ ಇದ್ದರು.