ಸುರಪುರ: ನಗರದ ಬೋವಿಗಲ್ಲಿ ಸ್ಪೂರ್ತಿ ಜ್ಞಾನ ವಿಕಾಸ ಕೇಂದ್ರ ಸಭೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಸಂಸ್ಥೆಯ ಸಹಯೋಗದಲ್ಲಿ ಆಹಾರ ಮೇಳ ಕಾರ್ಯಕ್ರಮ ನಡೆಸಲಾಯಿತು.ನಗರಸಭೆ ಸದಸ್ಯರಾದ ರೇಣುಕಾ ಅವರು ಜ್ಯೋತಿ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಸುಧಾ ಮಾತನಾಡಿ,ಜ್ಞಾನ ವಿಕಾಸ ಕಾರ್ಯಕ್ರಮದ ಆಶಯ,ಪೌಷ್ಠಿಕ ಆಹಾರ ಸೇವನೆಯ ಕ್ರಮಗಳ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿ ತಿಳಿಸಿಕೊಟ್ಟರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಸಮುದಾಯ ಆರೋಗ್ಯ ಅಧಿಕಾರಿ ಶ್ರೀಕಾಂತ ಮಾತನಾಡಿ,ಪೌಷ್ಠಿಕ ಆಹಾರ ಸೇವನೆ,ಶುದ್ಧ ಕುಡಿಯುವ ನೀರು,ಮೊಳಕೆ ಕಾಳು,ತರಕಾರಿ,ಹಣ್ಣು,ಹಾಲು ಸೇವನೆ,ಗರ್ಭೀಣಿ ಬಾಣಂತಿಯರ ಹಾರೈಕೆ,ಮಕ್ಕಳ ಪೋಷಣೆ, ಸಂಪೂರ್ಣ ಪೌಷ್ಠಿಕ ಆಹಾರ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸವಿತಾ,ಸೇವಾಪ್ರತಿನಿಧಿ ಮತ್ತು ಕೇಂದ್ರದ ಸದಸ್ಯರು ಹಾಗು ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.