ಕಲಬುರಗಿ: ಬ್ರಹ್ಮಪೂರ ಬಡಾವಣೆಯಲ್ಲಿರುವ ಕೊಂಡೇದಗಲ್ಲಿಯ ಶ್ರೀ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ಲಲಿತ ಕಲಾ ಸೇವಾ ಸಂಸ್ಥೆ ಮತ್ತಿಮಡು ತಾಲ್ಲೂಕ ಚಿತ್ತಾಪುರ ಜಿಲ್ಲಾ ಕಲಬುರಗಿ ವತಿಯಿಂದ ಕಲಾ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬಡಾವಣೆಯ ಮುಖಂಡ ರಮೇಶ ಹೋಸಪೆಟ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಿವದೇವ ಸ್ವಾಮಿ ಹಿರೇಮಠ, ಲಲಿತ ಕಲಾ ಸೇವಾ ಸಂಸ್ಥೆಯ ಕಾರ್ಯದರ್ಶಿ ಅಣ್ಣಾರಾವ ಶೆಳ್ಳಗಿ ಮತ್ತಿಮೂಡ, ಬಸವರಾಜ ಅಷ್ಟಗಿ, ಚಂದುಸ್ವಾಮಿ, ಸುನೀಲ ಮಹಾಗಾಂವಕರ್, ಶಿವಲೀಲಾ ಹಿರೇಮಠ, ಮೀನಾಕ್ಷಿ ಹೊಸಪೇಟ, ಕಲಾವಿದರಾದ ಸೈದಪ್ಪ ಚೌಡಾಪುರ, ಶಿವಕುಮಾರ ಪಾಟೀಲ, ತೇಜು ನಾಗೋಜಿ, ಶ್ರೀಶೈಲ ಕೊಂಡೆದ, ಶ್ರೀಶೈಲ ಪಾಟೀಲ ಝಳಕಿ, ಆನಂದ ನಂದಿಕೋಲಮo,. ನಾಗೇಂದ್ರ ಸಪ್ಪನಗೋಳ, ವಿನೋದ ದಸ್ತಾಪೂರ, ಶರಣಪ್ಪ ಎಚ್ ಕಂಬಾರ, ತಬಲಾ ವಾದಕರಾದ ಜಗದೀಶ ದೇಸಾಯಿಕಲ್ಲೂರ, ರವಿಸ್ವಾಮಿ ಗೋಟೂರ, ವಿಶಾಲ ಗೋಟೂರ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.