ಕಲಬುರಗಿ: ವಾರ್ಡ್ ನಂ.೫೪.ರ ಅಂಬಿಕಾ ನಗರದಲ್ಲಿ ಜೈ ಭವಾನಿ ತರುಣ ಸಂಘ ಹಾಗೂ ಸಿದ್ಧಿವಿನಾಯಕ ತರುಣ ಸಂಘದ ಸಕಲ ಸದ್ಭಕ್ತ ಮಂಡಳಿ ವತಿಯಿಂದ ಶ್ರೀ ಅಂಬಾ ಭವಾನಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಕುಂಭ ಮೆರವಣಿಗೆಯನ್ನು ಗಾಣದೇವತೆಯಿಂದ ಅಂಬಾ ಭವಾನಿ ದೇವಾಲಯದ ವರೆಗೆ ನಡೆಯಿತು.
ಈ ಸಂದರ್ಭದಲ್ಲಿ ಶಿವುಸ್ವಾಮಿ, ಕೃಷ್ಣ ಸುಣಗಾರ, ಸುರ್ಯಕಾಂತ ಹಿಂಗನಕರ್, ಸಂದಿಪ ಹಿಂಗಾನಕರ್, ಶಂಕರ ಸುಣಗಾರ, ಸುನೀಲ ಜಾಧವ, ಬಾಬುರಾವ ಪೂಜಾರಿ, ಮಜುಂನಾಥ ಕಡಬೂರ, ಶರಣು ಗಿಲಕಿ, ಆನಂದ ರೆಡಿ, ಗುಡಪ್ಪ ಸಂಗೋಳ್ಳಿ ಹಾಗೂ ಭಕ್ತಾಧಿಗಳು ಇದ್ದರು.