ಕಲಬುರಗಿ: ನಗರದ ಹಳೆಯ ಆರ್ಟಿಒ ಕಚೇರಿ ಬಳಿಯಿರುವ ಎಎಸ್ಎಂ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯ ೮ ನೇ ವಾರ್ಷಿಕೋತ್ಸವ ಹಾಗೂ ವೈದ್ಯರ ದಿನಾಚರಣೆ ಕಾರ್ಯಕ್ರಮವು ಎ.ಎಸ್.ಎಮ್ ಆಸ್ಪತ್ರೆಯಲ್ಲಿ ಜರುಗಿತು.
ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್, ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಕೆಕ್ ಕಟ್ ಮಾಡುವ ಮೂಲಕ ಆಸ್ಪತ್ರೆಯ ೮ ನೇ ವಾರ್ಷಿಕೋತ್ಸವಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಆಸ್ಪತ್ರೆಯ ಎಲ್ಲ ಡಾಕ್ಟರ್ ಸಿಬ್ಬಂದಿ ಅವರಿಗೆ ಇಂದಿನ ದಿನ ಶುಭ ಕೋರುತ್ತೇನೆ. ಎ.ಎಸ್.ಎಂ ಸೇವೆ ಅಮೋಘವಾದದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಉತ್ತುಂಗಕ್ಕೆ ಏರಲಿ ಎಂದು ಶುಭ ಹಾರೈಸಿದರು.
ಆಸ್ಪತ್ರೆಯ ಮಾಲೀಕರಾದ ಮಿರ್ಜಾ ಅನವರ್ ಬೇಗ ಮಾತನಾಡಿದರು. ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಡಾ, ಬಸವರಾಜ ಜಿಟಿ, ಡಾ, ಗಿರೀಶ್ ನೂಲಾ, ಡಾ.ಆನಂದ ಮಂಗಲಗಿ, ಡಾ,ತಸವಿನ್ ಉಸ್ತಾದ್, ಡಾ.ರವೀಂದ್ರ ರಾಯರಾಮ್, ಡಾ,ಕೈಲಾಸ ಬನಾಳೆ, ಡಾ.ನೀತಿನ್ ಠಾಕೂರ್, ಡಾ,ಶಶಾಂಕ್ ರಾಮದುರ್ಗ, ಡಾ,ಶಶಾಂಕ ಸಂಗೋಳಗಿ, ಡಾ ಸೌಮ್ಯ ದೇಶಮುಖ, ಆಸ್ಪತ್ರೆ ಮಾಲೀಕರಾದ ಮಿರ್ಜಾ ಅನವರ್ ಬೇಗ್, ಆಡಳಿತ ವ್ಯವಸ್ಥಾಪಕ ಮಿರ್ಜಾ ಅಫರೋಜ್ ಬೇಗ್, ಮಿಜಾ೯ ಫಯಾಜ್ ಬೇಗ್,ಮಿರ್ಜಾ ಫರಾತ್ ಬೆಗ್, ಜಿಎಂ ಶೆಖ್ ಆಜಂ,ಆಡಮಿನ್ ಶರಣ ಅರಮನಿ,ಧನರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.