ಪಾರಂಕುಶ ಮಠಮದಲ್ಲಿ ಅರ್ಚಕರ ಸಂಘದ ಜಿಲ್ಲಾಧ್ಯಕ್ಷರಿಗೆ ಸನ್ಮಾನ

0
12

ಸುರಪುರ: ನಗರದ ಪರಾಂಕುಶ ಮಠದಲ್ಲಿ ವಿಪ್ರ ಸಮಾಜದ ವತಿಯಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತ ಪರಿಷತ್‍ನ ನೂತನ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಭೀಮಶೇನಾಚಾರ್ಯ ಜೋಷಿ ಹಾಗೂ ವಿಪ್ರ ಅಡುಗೆದಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕಗೊಂಡ ಕೃಷ್ಣಾಚಾರ್ಯ ಜೋಷಿ ಅವರಿಗೆ ಸನ್ಮಾನ ಸಮಾರಂಭ ನಡೆಸಿ ಇಬ್ಬರಿಗೂ ಸನ್ಮಾನಿಸಿ ಗೌರವಿಸಲಾಯಿತು.

ಅರ್ಚಕರು ಹಾಗೂ ಪುರೋಹಿತರ ಸಂಘದ ಪ್ರಧಾನ ಕಾರ್ಯದರ್ಶಿ ಕಿರಣಕುಮಾರ ಜೋಷಿ, ಆಂಜನೇಯಾಚಾರ್ಯಲು, ವಿಪ್ರ ಸಮಾಜದ ಹಿರಿಯರಾದ ದೇವಿದಾಸಭಟ್ ಸೀತಾರಾಮಾಚಾರ್ಯ ಐಜಿ, ರಾಘವೇಂದ್ರಾಚಾರ್ಯ ಶಾಂತಪುರ, ಕೇದಾರನಾಥ ಶಾಸ್ತ್ರಿ, ಮಲ್ಲಾರಾವ ಕುಲಕರ್ಣಿ ಸಿಂದಗೇರಿ,ನರಸಿಂಹರಾವ ಬಾಡಿಯಾಲ, ಗಣೇಶ ಜಹಗೀರದಾರ, ,ವಿಜಯರಾಘವನ್.ಪಿ,ಧೀರೇಂದ್ರ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ, ಚಂದ್ರಕಾಂತ ನಾಡಗೌಡ, ಉಮಾಶಂಕರ ದೀಕ್ಷಿತ ಸೇರಿದಂತೆ ಸುರಪುರ, ಹುಣಸಗಿ, ಶಹಾಪುರ ಹಾಗೂ ಯಾದಗಿರಿ ತಾಲೂಕುಗಳಿಂದ ಅರ್ಚಕರ ಸಂಘ ಹಾಗೂ ಬ್ರಾಹ್ಮಣ ಸಮಾಜದ ಬಾಂಧವರು ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here