ಚಿತ್ತಾಪುರ ಕ್ಷೇತ್ರದಿಂದ ಮಣಿಕಂಠ್ ಬಿಜೆಪಿ ಅಭ್ಯರ್ಥಿ

0
55

ಕಲಬುರಗಿ: ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರ ಪುತ್ರ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಎದುರಾಳಿಯಾಗಿ ಮಣಿಕಂಠ್ ರಾಠೋಡ್ ಅವರಿಗೆ ಚಿತ್ತಾಪುರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.

ಚಿತ್ತಾಪುರ ಮತಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯ ಸುನಿಲ್ ವಲ್ಯಾಪುರೆ, ಬಿಜೆಪಿ ಮುಖಂಡ ಅರವಿಂದ ಚೌವ್ಹಾಣ, ಮಾಜಿ ಶಾಸಕ ದಿ. ವಾಲ್ಮೀಕಿ ನಾಐಕ್ ಪುತ್ರ ವಿಠ್ಠಲ್ ನಾಯಕ್ ಬಿಜೆಪಿ ಟಿಕೆಟ್ ಗಾಗಿ ಪ್ರಬಲ ಆಕಾಂಕ್ಷಿಗಳಾಗಿದ್ದರು. ಬಿಜೆಪಿ ಮೊದಲ 189 ಅಭ್ಯರ್ಥಿಗಳ ಪಟ್ಟಿಯಲ್ಲಿ ರೌಡಿ ಶೀಟರ್ ಮಣಿಕಂಠ್ ರಾಠೋಡ್ ಅವರನ್ನು ಚಿತ್ತಾಪುರ ಕೇಂದ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದೆ.

Contact Your\'s Advertisement; 9902492681

ಇತ್ತೀಚಿಗೆ ಯಾದಗಿರಿ ಜಿಲ್ಲಾ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ಮತ್ತು ಹಲವು ರೌಡಿ ಶೀಟರ್ ಪ್ರಕರಣಗಳನ್ನು ಎದುರಿಸುತ್ತಿದ್ದು, ಮಣಿಕಾಂಠ್ ರಾಠೋಡ್ ಗೆ ಕಲಬುರಿಗ ಪೊಲೀಸ್ ಕಮಿಷನರ್ ಆಗಿದ್ದ, ಡಾ.ವೈಎಸ್ ರವಿಕುಮಾರ್ ಗಡಿಪಾರು ಮಾಡಿದರು. ಇದಕ್ಕೆ ಮಣಣಿಕಂಠ ರಾಠೋಡ್ ಹೈ ಕೋರ್ಟನಿಂದ ತಡೆಯಾಜ್ಞೆ ತಂದಿದ್ದರು. ಅನ್ನಭಾಗ್ಯ ಆಕ್ರಮ ಅಕ್ಕಿ ಸಾಗಾಣಿಗೆ ಸೇರಿದಂತೆ ಕಲಬುರಗಿ ಯಾದಗಿರಿ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಇವರ ಮೇಲೆ ಪ್ರಕರಣಗಳು ದಾಖಲಾಗಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here