ಜೇವರ್ಗಿ: ತಾಲ್ಲೂಕಿನ ಹೆಗ್ಗಿನಾಳ ಗ್ರಾಮದ ಹಾಲುಮತ ಸಮಾಜದ ಮುಖಂಡರು ವಿಧಾನಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಶಿವರಾಜ ಪಾಟೀಲ ರದ್ದೇವಾಡಗಿ ರವರನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಯುವ ನಾಯಕ ನಿಂಗಣ್ಣ ರದ್ದೇವಾಡಗಿ ಹಾಗೂ ಪುರಸಭೆ ಸದಸ್ಯರಾದ ಸಂತೋಷ ಮಲ್ಲಾಬಾದ ರವರ ನೇತೃತ್ವದಲ್ಲಿ ಸೇರ್ಪಡೆಯಾದರು.
ಈ ವೇಳೆ ಕ್ಷೇತ್ರದ ಉಸ್ತುವಾರಿ ಶಶೀಲ್ ನಮೋಶಿˌ ಪುರಸಭೆ ಸದಸ್ಯರಾದ ಸಂಗನಗೌಡ ಪಾಟೀಲ ಸೇರಿದಂತೆ ಅನೇಕ ಯುವ ನಾಯಕರು ಇದ್ದರು.