ಕಲಬುರಗಿ: ವಾರ್ಡ ನಂ.46.ರ ಯತಿಮಖಾನ್, ಗುಲಾಬಡಿ ಬಡಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ ಸಮ್ಮುಖದಲ್ಲಿ ಬಿಜೆಪಿ ಸಿಂಡಿಕೆಟ್ ಮಾಜಿ ಸದಸ್ಯ ಮಹ್ಮದ್ ರಫಿಕ್ ಅಹ್ಮದ್, ಮಹ್ಮದ್ ಮುಕ್ತಾರ ಅಹ್ಮದ್, ಮಹ್ಮದ್ ಮುಕಿಮ್ಮ ಅಹ್ಮದ್, ಏಜಾಜ್ ಅಹಿಮದ್, ಅಬ್ದುಲ್ ಮಲ್ಲಿಕ್, ಜಮೀಲ್ ಅಹ್ಮದ್, ನಿಸಾರ ಅಹ್ಮದ್, ಮಹ್ಮದ್ ಸಿರಾಜ್, ಮಹ್ಮದ್ ಹಕಿಂ, ಮಹ್ಮದ್ ಜುಬೇರ್ ಸೇರಿದಂತೆ ನೂರಾರು ಕಾರ್ಯಕರ್ತರು ಬಿಜೆಪಿ ಪಕ್ಷ ತೋರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾದರು. ಮುಖಂಡರಾದ ಓಯಾಜ್ ಶೇಖ, ನೀಲಕಂಠರಾವ ಮೂಲಗೆ, ಲಿಂಗರಾಜ ಕಣ್ಣಿ, ಪವನಕುಮಾರ ವಳಕೇರಿ, ನಾಗಣ್ಣ ಶೇರಿಕಾರ ಸೇರಿದಂತೆ ಇತರರು ಇದ್ದರು.