ಕಲಬುರಗಿ: ಜಗತ್ತಿನ ಆಯಾ ಕ್ಷೇತ್ರದಲ್ಲಿ ದುಡಿಯುವ ವರ್ಗದ ಜನರಿಗೆ ಮೆ.1 ಕಾರ್ಮಿಕರ ದಿನಾಚರಣೆ ಸಮಸ್ತ ದುಡಿಯುವ ಜನರಿಗೆ ಹಬ್ಬದÀ ಪ್ರತಿಕವಾದ ದಿನವಾಗಿದೆ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಭೀಮರಾಯ ಎಂ. ಕಂದಳ್ಳಿ ತಿಳಿಸಿದರು.
ಕಾರ್ಮಿಕ ದಿನಾಚರಣೆ ನಿಮಿತ್ತ ಸಂಘದ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಈ ದಿನದಂದು ಎಲ್ಲಾ ಕ್ಷೇತ್ರದ ಕಾರ್ಮಿಕರು ತಮ್ಮ ತಮ್ಮ ಕೆಲಸಕ್ಕೆ ಗೈರಾಗಿ ಮತ್ತು ಕೆಲಸ ಬಂದು ಮಾಡಿ ತಮ್ಮ ಸ್ವಾಭಿಮಾನದ ದಿನಾಚರಣೆ ಮಾಡುವುದು ನಮ್ಮ ಕಾರ್ಮಿಕ ವರ್ಗದ ಧರ್ಮವಾಗಿದೆ ಎಂದು ತಿಳಿಸಿದರು.
ಸಂಘದ ಗೌರವಾಧ್ಯಕ್ಷ ರಾಜು ಜಮಾದಾರ, ಉಪಾಧ್ಯಕ್ಷರಾದ ಶಿವಕುಮಾರ ಬೆಳಗೇರಿ, ಮಹಾಂತೇಶ ದೊಡ್ಡಮನಿ, ಖಜಾಂಚಿ ದೇವಿಂದ್ರ ಉಳ್ಳಗಡ್ಡಿ, ಸಹಕಾರ್ಯದರ್ಶಿಗಳಾದ ಶರಣು ಬಳಿಚಕ್ಕರ, ಚಂದ್ರಕಾಂತ ತುಪ್ಪದಕರ, ಸಂಘಟನಾ ಕಾರ್ಯದರ್ಶಿ ಮಲ್ಲು ಬೋಳೆವಾಡ, ಪತ್ರಿಕಾ ಕಾರ್ಯದರ್ಶಿ ಬಾಬುರಾವ ದೇವರಮನಿ, ಶರಣು ಗಾಜಿಪೂರ, ಸಂಚಾಲಕ ಅಣ್ಣಯ್ಯ ಗುತ್ತೇದಾರ ಇನ್ನಿತರರು ಇದ್ದರು.
ಆಯಾ ಕ್ಷೇತ್ರದ ಕಾರ್ಮಿಕರಾದ ಗೌಂಡಿ ಕಾರ್ಮಿಕರು, ಕಟ್ಟಡ ಸಹಾಯಕ ಮತ್ತು ಸಹಾಯಕಿಯರು, ಕಾರ್ಪೇಂಟರ್ ಕೆಲಸಗಾರರು, ಡೆಕೋರೇಷನ್ ಕೆಲಸಗಾರರು, ಗ್ರೇನೈಟ್ ಮತ್ತು ಪರ್ಸಿ ಹಾಕುವವರು, ಸೆಂಟರಿಂಗ ಕೆಲಸಗಾರರು, ಪ್ಲಂಬರ್ ಕೆಲಸಮಾಡುವವರು, ಪೇಂಟರ್ ಕೆಲಸಗಾರರು, ಎಲಿಕ್ಟ್ರೀಸಿಯನ್ ಕೆಲಸಗಾರರು, ಗಾರ್ಡನ್ ಕೆಲಸಗಾರರು ಭಾಗವಹಿಸಿದ್ದರು.