ಕುರುಬ ಯುವ ಘಟಕದ ಪದಗ್ರಹಣ ಕಾರ್ಯಕ್ರಮದ ಪೂರ್ವಭಾವಿ ಸಭೆ

0
14

ಕಲಬುರಗಿ: ನಗರದ ಶ್ರೀ ಬೀರಲಿಂಗೇಶ್ವರ ವಸತಿ ನಿಲಯದಲ್ಲಿ ಕರ್ನಾಟಕ ಪ್ರದೇಶ ಕುರುಬ ಯುವ ಘಟಕದ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ ರಾಮಚಂದ್ರಪ್ಪ ಉದ್ಘಾಟಿಸಿದರು.

ಕರ್ನಾಟಕ ಪ್ರದೇಶ್ ಕುರುಬ ಯುವ ಘಟಕ ಜಿಲ್ಲಾ ಮತ್ತು ಎಲ್ಲಾ ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಮುಂಬರುವ ದಿನಗಳಲ್ಲಿ ಯಾವ ರೀತಿಯಾಗಿ ಯಶಸ್ವಿಗೊಳಿಸಬೇಕೆಂದು ಎಲ್ಲಾ ಪದಾಧಿಕಾರಿಗಳು ಸಮಾಜದ ಹಿರಿಯರು ಚರ್ಚಿಸಲಾಯಿತು. ಎಲ್ಲಾ ಹಿರಿಯ ಮುಖಂಡರಿಗೂ ಎಲ್ಲಾ ಅತಿಥಿಗಳಿಗೂ ಸನ್ಮಾನಿಸಿ ಗೌರವಿಸಲಾಯಿತು.

Contact Your\'s Advertisement; 9902492681

ಈ ಸಭೆಯಲ್ಲಿ ನಮ್ಮ ಸಮಾಜದ ಗುರುಗಳಾದ ಪರಮಪೂಜ್ಯ ಶ್ರೀ ಬೀರದೇವರು, ಕರ್ನಾಟಕ ಪ್ರದೇಶ್ ಕುರುಬ ಯುವ ಘಟಕದ ರಾಜ್ಯಧ್ಯಕ್ಷ ಭಗವಂತರಾಯ ಗೌಡ ಪಾಟೀಲ, ಕರ್ನಾಟಕ ಪ್ರದೇಶ ಕುರುಬ ಸಂಘದ ಜಿಲ್ಲಾಧ್ಯಕ್ಷ ಗುರುನಾಥ್ ಪೂಜಾರ, ಸಮಾಜದ ಹಿರಿಯ ಮುಖಂಡರಾದ ದೇವೇಂದ್ರಪ್ಪ ಮರತೂರ, ರಾಜ್ಯ ನಿರ್ದೇಶಕರಾದ ಮಲ್ಲಿಕಾರ್ಜುನ್ ಬಂಕುರ್, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಮಾಂತೇಶ್ ಕೌಲಗಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಧರ್ಮರಾಜ್ ಹೇರೂರ, ಸಮಾಜದ ಯುವನಾಯಕ ಮಹೇಶ್ ಧರಿ, ರಾಜ್ಯ ಯುವ ಘಟಕದ ನಿರ್ದೇಶಕರಾದ ಕಾಶಿನಾಥ್ ಮರ್ತೂರ್, ಚಂದ್ರಕಾಂತ ಬರಗಾಲಿ, ಪ್ರವೀಣ್ ಮರ್ತೂರ್, ಜಿಲ್ಲಾ ಕಾನೂನು ಸಲಹೆಗಾರ ಸಂತೋಷ ಗುಡೂರ, ಜಿಲ್ಲಾ ಕಾರ್ಯಧ್ಯಾಕ್ಷರಾದ ಜಿಲ್ಲಾ ನಿರ್ದೇಶಕರಾದ ಬಂಗಾರಪ್ಪ ಪೂಜಾರಿ ಜೇವರ್ಗಿ, ಸಿದ್ದಪ್ಪ ಪೂಜಾರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಸುರೇಶ್ ಬಿರಾದರ್, ಜಿಲ್ಲಾ ಹಿರಿಯ ಉಪಾಧ್ಯಕ್ಷರಾದ ಅಯ್ಯಪ್ಪ ಪೂಜಾರಿ, ಯುವ ಘಟಕದ ಸೇಡಂ ಅಧ್ಯಕ್ಷ ಯಲ್ಲಾಲಿಂಗ ದಂಡೋತಿ, ಚಿಂಚೋಳಿ ಯುವ ಘಟಕದ ಅಧ್ಯಕ್ಷ ರಾಜಕುಮಾರ್ ಖಂಡಗೊಂಡ್, ಗ್ರಾಮೀಣ ಯುವ ಘಟಕದ ಅಧ್ಯಕ್ಷ ಸೂರ್ಯಕಾಂತ ಪೂಜಾರಿ ಇಟಗಾ, ನಗರ ಅಧ್ಯಕ್ಷ ಪ್ರವೀಣ್ ಪೂಜಾರಿ ಶಿವಶಕ್ತಿ ನಗರ್, ಕರ್ನಾಟಕ ಪ್ರದೇಶ ಕುರುಬ ಯುವ ಘಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಶ್ ಡಿ ಮುಚಖೇಡ ಹಾಗೂ ಪದಾಧಿಕಾರಿಗಳು ಸಮಾಜದ ಹಿರಿಯರು ಸಮಾಜದ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here