ಸುರಪುರ: ಕಾಂಗ್ರೆಸ್ ಅಭ್ಯರ್ಥಿ ಆರ್.ವಿ ನಾಯಕ ಪ್ರಚಾರ

0
9

ಸುರಪುರ:ವಿಧಾನಸಭಾ (ಎಸ್.ಟಿ) ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಾಜಾ ವೆಂಕಟಪ್ಪ ನಾಯಕ ಅವರು ನಗರದಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರಕಾರದ ಅವಧಿಯಲ್ಲಿ ರಾಜ್ಯದಲ್ಲಿ ವಿವಿಧ ಭಾಗ್ಯಗಳ ಕಲ್ಪಿಸುವ ಯೋಜನೆಗಳನ್ನು ಜಾರಿಗೆ ತರಲಾಗಿತ್ತು ಕಾಂಗ್ರೆಸ್ ಪಕ್ಷ ನಿಜವಾಗಿ ಬಡವರ ಹಾಗೂ ದೀನ ದಲಿತರ ಪರವಾರಿ ಇರುವ ಪಕ್ಷ ಎಂದು ಹೇಳಿದ ಅವರು ನನ್ನ ಅಧಿಕಾರ ಅವಧಿಯಲ್ಲಿ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಸಮಾನ ಅವಕಾಶ ನೀಡಿದ್ದು ಸರಕಾರದ ಅನುದಾನವನ್ನು ವಿವಿಧ ಅಭಿವೃದ್ಧಿ ಕೆಲಸಗಳಿಗೆ ಮಂಜೂರು ಮಾಡಿಸಿದ್ದೇನೆ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಸರಕಾರದ ಸಾಧನೆಗಳನ್ನು ಮತದಾರರಿಗೆ ತಿಳಿಸುವ ಮೂಲಕ ಈ ಬಾರಿ ಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಮತದಾರರು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

Contact Your\'s Advertisement; 9902492681

ಸುರಪುರ ಸಂಸ್ಥಾನ ಅರಸು ವಂಶಸ್ಥರಾದ ರಾಜಾ ಲಕ್ಷ್ಮೀನಾರಾಯಣ ನಾಯಕ, ಮುಖಂಡರಾದ ಮಲ್ಲಣ್ಣ ಮುಧೋಳ ನರಸಿಂಗಪೇಟ, ಮಲ್ಲಣ್ಣ ಐಕೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ನಗರಸಭೆ ಸದಸ್ಯ ಜುಮ್ಮಣ್ಣ ಕೆಂಗೂರಿ, ವೆಂಕಟೇಶ ನಾಯಕ ವಕೀಲರು, ಮಲ್ಲಣ್ಣ ಬೋವಿ, ಲಂಕೆಪ್ಪ ಕವಲಿ, ಸಿದ್ದಪ್ಪ ಗುಡ್ಡಕಾಯಿ, ದಾವೂದಸಾಬ ಮೆಡಿಕಲ್, ಹಣಮಂತ ಭಜಂತ್ರಿ, ಭೀಮರಾಯ ಕುಂಬಾರ, ಸೂಗುರಾಜ ಪಾಣಿ, ಗೋವಿಂದಪ್ಪ ಕವಲಿ, ರವಿ ಕುಂಬಾರ, ಮರೆಪ್ಪ ಶಾಂತಪೂರ, ಬಲಭೀಮ ನಾಯಕ, ಚಂದ್ರ ದನಕಾಯಿ, ಮಲ್ಲಣ್ಣ ಹುಬ್ಬಳ್ಳಿ, ಪ್ರಕಾಶ ಪಗಡೆಕಲ್ ಇತರರಿದ್ದರು.

ಈ ಸಂದರ್ಭದಲ್ಲಿ ಕುಂಬಾರಪೇಟೆಯಲ್ಲಿ ಪ್ರಚಾರಕ್ಕೆ ಆಗಮಿಸಿದ ರಾಜಾ ವೆಂಕಟಪ್ಪ ನಾಯಕ ಅವರಿಗೆ ಮಹಿಳೆಯರು ಕಳಶ ಸಹಿತ ಆರತಿ ಬೆಳಗುವ ಮೂಲಕ ಗೆಲವು ಸಾಧಿಸಲಿ ಎಂದು ಶುಭ ಹಾರೈಸಿದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here