ಸುರಪುರ: ಇಲ್ಲಿಯ ತಹಸೀಲ್ದಾರ್ ಕಚೇರಿಯಲ್ಲಿನ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಾಲ್ಕು ನಾಮಪತ್ರಗಳ ಸಲ್ಲಿಕೆಯಾಗಿವೆ.ಸುರಪುರ ವಿಧಾನಸಭಾ ಕ್ಷೇತ್ರ (ಪ.ಪಂ) ಮೀಸಲು ಕ್ಷೇತ್ರದಲ್ಲಿ ಈವರೆಗೆ 14 ಅಭ್ಯಾರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಗುರವಾರ ಜೆಡಿಎಸ್ ಅಭ್ಯಾರ್ಥಿಯಾಗಿ ಶ್ರಾವಣಕುಮಾರ ಕನಪ್ಪ ನಾಮಪತ್ರ ಸಲ್ಲಿಸಿದರೆ,ಪಕ್ಷೇತರ ಅಭ್ಯಾರ್ಥಿಗಳಾಗಿ ಶಶಿಕುಮಾರ ಶಿವಪ್ಪ ಚೌಡೇಶ್ವರಿಹಾಳ,ವೆಂಕಟಪ್ಪ ನಾಯಕ ಚಂದ್ರಶೇಖರ ಬಿಚ್ಚಗತ್ತಿಕೇರ ಹಾಗೂ ಅಶೋಕ ಲಕ್ಷ್ಮಣ ವೆಂಕಟಾಪುರ ನಾಮಪತ್ರ ಸಲ್ಲಿಸಿದ್ದು, ಇದರಿಂದಾಗಿ ಬಿಜೆಪಿ,ಕಾಂಗ್ರೆಸ್, ಜೆಡಿಎಸ್ ಮತ್ತು ಅಮ್ ಆದ್ಮಿ ಪಕ್ಷ ಸೇರಿ ಪಕ್ಷೇತರರು ಸೇರಿ ಒಟ್ಟು 14 ಜನ ಹುರಿಯಾಳುಗಳು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.