Saturday, July 13, 2024
ಮನೆಬಿಸಿ ಬಿಸಿ ಸುದ್ದಿರೈತರಿಗೆ ಕಾಂಗ್ರೆಸ್ ಸರ್ಕಾರದ ನೆರವು ಖಚಿತ: ಗುರುಶರಣ

ರೈತರಿಗೆ ಕಾಂಗ್ರೆಸ್ ಸರ್ಕಾರದ ನೆರವು ಖಚಿತ: ಗುರುಶರಣ

ಆಳಂದ: ರಾಜ್ಯದÀಲ್ಲಿ ನಾಳೆ ಅಧಿಕಾರ ಗದ್ದುಗೆ ಏರಲಿರುವ ಕಾಂಗ್ರೆಸ್ ಸರ್ಕಾರದಿಂದ ರೈತರಿಗೆ ಪ್ರಸಕ್ತ ಹಂಗಾಮಿನಲ್ಲಿ ಬೀಜ, ಗೊಬ್ಬರ ಕೃಷಿ ಸಾಲ ಸೌಲಭ್ಯ ವಿತರಣೆಯಲ್ಲಿ ನೆರವು ನೀಡಲಿದೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಕೊರಳ್ಳಿ ಗ್ರಾಮದಲ್ಲಿ ಗುರುವಾರ ಅಭಿಮಾನಿ ಬಳಗವು ಆಯೋಜಿಸಿದ್ದ ತಮ್ಮ ಹುಟ್ಟು ಹಬ್ಬದ ನಿಮ್ಮಿತ ನೀಡಿದ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ರಾಜ್ಯ ಸಚಿವ ಸಂಪುಟದಲ್ಲಿ ನೂತನ ಶಾಸಕ ಬಿ.ಆರ್. ಪಾಟೀಲರಿಗೆ ಪಕ್ಷದ ವರಿಷ್ಠರು ಅವಕಾಶ ನೀಡಬೇಕು. ಅವರು ಸದಾ ರೈತಪರ ನಾಯಕರಾಗಿದ್ದಾರೆ. ರೈತರ ಎಲ್ಲ ಸಮಸ್ಯೆಗಳಿಗೆ ಅವರು ಸರ್ಕಾರ ಮಟ್ಟದಲ್ಲಿ ಧ್ವನಿಯಾಗಿ ಕೆಲಸ ಮಾಡಲಿದ್ದು, ರೈತರ ಸಮಸ್ಯೆಗಳಿ ಅವರು ಸ್ಪಂದಿಸಲಿದ್ದಾರೆ. ಬರುವ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ, ಗೊಬ್ಬರ ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಸಕಾಲಕ್ಕೆ ರೈತರಿಗೆ ಒದಗಿಸಲು ಕ್ರಮಕೈಗೊಳ್ಳಲು ಶಾಸಕರ ಮತ್ತು ಸಂಬಂಧಿ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.

ಜಿಪಂ ಮಾಜಿ ಸದಸ್ಯೆ ಮೀನಾಕ್ಷಿ ಜಿ. ಪಾಟೀಲ ಉಪಸ್ಥಿತರಿದ್ದರು, ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಕೊರಳ್ಳಿ, ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗುರುಲಿಂಗ ಜಂಗಮ ಪಾಟೀಲ, ಬಾಬುಗೌಡ ಪಾಟೀಲ ಭೂಸನೂರ, ದೇವಿಂದ್ರಪ್ಪಾ ಮೇಲಿಕೇರಿ ಧಂಗಾಪೂರ, ಗ್ರಾಪಂ ಸದಸ್ಯ ಪ್ರಸಾದ ಪಾಟೀಲ ಸೇರಿದಂತೆ ಗ್ರಾಮದ ಅಭಿಮಾನಿಗಳು ಮತ್ತು ನೆರೆ ಹೊರೆ ಗ್ರಾಮದ ಅಭಿಮಾನಿಗಳು ಆಗಮಿಸಿ ಗೌರವ ಸನ್ಮಾನ ನೀಡಿದರು.

ಸಂಜೆ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ತೆರೆದ ವಾಹನದಲ್ಲಿ ಅಭಿಮಾನಿಗಳು ಗುರುಶರಣ ಪಾಟೀಲ ಅವರ ಮೆರವಣಿಗೆ ಕೈಗೊಂಡು ಅಭಿಮಾನ ಮೆರೆದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular