ಸುಭಾಷ ರಾಠೋಡ್ ಗೆ ಸೂಕ್ತ ಸ್ಥಾನ ಒದಗಿಸಲು ಮನವಿ

0
20

ಕಲಬುರಗಿ: ಕಾಂಗ್ರೆಸ್ ಪಕ್ಷದ ಮುಖಂಡ, ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸುಭಾಷ ರಾಠೋಡ ಅವರು ಕೇವಲ 558 ಮತಗಳ ಅಂತರದಿಂದ ಸೋತಿದ್ದು, ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಕಾಳಗಿ ಕೋಡ್ಲಿ ಬ್ಲಾಕ್ ಕಾಂಗ್ರೆಸ್ ಕೋಶಾಧ್ಯಕ್ಷ ವೀರಭದ್ರಯ್ಯ ಸಾಲಿಮಠ ಮನವಿ ಮಾಡಿದರು.

ಪಕ್ಷದ ನಿμÁ್ಠವಂತ ಕಾರ್ಯಕರ್ತರಾಗಿ ಯಾವುದೇ ಜಾತಿ, ಬೇಧವಿಲ್ಲದೆ, ಸಂಕಷ್ಟದಲ್ಲಿರುವವರಿಗೆ ನ್ಯಾಯ ಒದಗಿಸುವ ಮೂಲಕ ಕ್ಷೇತ್ರದಾದ್ಯಂತ ಒಳ್ಳೆಯ ಹೆಸರು ಮಾಡಿರುವ ರಾಠೋಡ್ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಿಲ್ಲೆಯ ಸಚಿವರು ಹಾಗೂ ಪಕ್ಷದ ವರಿಷ್ಠರು ಸುಭಾಷ ರಾಠೋಡ ಅವರ ಪ್ರಾಮಾಣಿಕ ಸೇವೆ ಗುರುತಿಸಿ ಸೂಕ್ತ ಸ್ಥಾನ ಮಾನ ನೀಡಬೇಕು ಎಂದು ಒತ್ತಾಯಿಸಿದರು.

ಬಸವರಾಜ ತುಪ್ಪದ, ಗಿರಿಮಲ್ಲಪ್ಪ ಬೂಸೂನ, ವಿಜಯಕುಮಾರ ತಮಕೂನ, ದೇಸು ಚವ್ಹಾಣ, ಮಹೆತಾಬ ಖುರೇಶಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here