ಕಾಣೆಯಾಗಿದ್ದಾರೆ; ವಿಠ್ಠಲ್ ಭೀಮಳ್ಳಿ

0
13

ಶಹಾಬಾದ: ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮದ ನಿವಾಸಿ ವಿಠ್ಠಲ್ ಭೀಮಳ್ಳಿ (80) ಕಾಣೆಯಾಗಿದ್ದಾರೆ.

ಇವರು ಫೆಬ್ರವರಿ 15 ರಂದು ಸಾಯಂಕಾಲ 5:30 ಗಂಟೆಗೆ ಶೌಚಕ್ಕೆ ಹೋಗಿ ಬರುತ್ತೆನೆ ಎಂದು ಹೊರಗಡೆ ಹೋದವರು ಮನೆಗೆ ಬರಲಿಲ್ಲ. ನಂತರ ಗಾಬರಿಯಾಗಿ ನನ್ನ ಮಗ ಹಾಗೂ ಮಗಳಿಗೆ ತಿಳಿಸಿ ಗ್ರಾಮದಲ್ಲಿ ಹುಡುಕಾಡಿದೆವು. ಗ್ರಾಮದ ವ್ಯಕ್ತಿಯೊಬ್ಬರೂ ನಿನ್ನ ಗಂಡ ಜೇವರ್ಗಿಯಿಂದ ಶಹಾಬಾದಗೆ ಹೋದ ಬಸ್ಸಿನಲ್ಲಿ ಹೋಗಿದ್ದಾನೆ ಎಂದು ಹೇಳಿದರು.

Contact Your\'s Advertisement; 9902492681

ತಕ್ಷಣವೇ ಶಹಾಬಾದ ನಗರಕ್ಕೆ ಹೋಗಿ ಹುಡುಕಾಡಿದರೂ ಸಿಗಲಿಲ್ಲ. ನಂತರ ಎರಡು ದಿನಗಳ ನಂತರ ನಮ್ಮೂರ ಹುಡುಗನೊಬ್ಬ ನಿನ್ನ ಗಂಡ ಹೈದ್ರಬಾದದಿಂದ ಮುಂಬೈಗೆ ಹೋಗುವ ಹುಸೇನ್ ಸಾಗರ ರೇಲ್ವೆಯಲ್ಲಿ ಹೋಗಿದ್ದನ್ನು ನೋಡಿದ್ದೆನೆ ಎಂದು ಹೇಳಿದಾಗ, ಅಕ್ಕಲಕೋಟ್, ಸೋಲಾಪೂರ,ಪೂನಾ,ಕಲ್ಯಾಣ, ದಾದರ, ಮುಂಬೈ ಸೇರಿದಂತೆ ಎಲ್ಲಾ ಕಡೆ ಹುಡುಕಡಿದರೂ ಸಿಕ್ಕಿರುವುದಿಲ್ಲ ಆದ ಕಾರಣ ಅವರ ಪತ್ನಿ ಮಹಾದೇವಿ ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಈ ಬಗ್ಗೆ ಯಾರಿಗಾದರೂ ಈ ವ್ಯಕ್ತಿ ಕಂಡು ಬಂದಲ್ಲಿ ನಗರ ಪೊಲೀಸ್ ಠಾಣೆಗೆ ಮೋ.ಸಂ 9480803570ಗೆ ಸಂಪರ್ಕಿಸಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here