ಕಲಬುರಗಿ: ಮಾದಿಗ ಸಮುದಾಯದ ಕಲಬುರಗಿ ಜಿಲ್ಲೆಗೆ ಮೊಟ್ಟಮೊದಲ ಬಾರಿಗೆ ಮಹಿಳಾ ನೂತನ ತಹಸಿಲ್ದಾರ್ರಾಗಿ ಅಧಿಕಾರ ವಹಿಸಿಕೊಂಡ ನಾಗಮ್ಮ ಎಂ ಕಟ್ಟಿಮನಿ ಅವರಿಗೆ ಡಿಎಂಎಸ್ಎಸ್ ಕಮಲಾಪುರ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಹದೇವ್ ಎಸ್ ಲೇಂಗಟಿ, ಗ್ರಾಮ ಪಂಚಾಯಿತಿ ಸದಸ್ಯ ಆಕಾಶ ಎಂ ಪಾಟೀಲ್, ಮಹದೇವ ಎ ಮಾಳಗೆ, ಶರಣು ಗಾಜಿಪುರ್, ಎಲ್.ಬಿ.ಪಾಟೀಲ್, ಗುಂಡಪ್ಪ, ಮಲ್ಲಿಕಾರ್ಜುನ್, ಹಣಮಂತ, ಶಿವಕುಮಾರ್ ಇದ್ದರು.