ಕಲಬುರಗಿ; ಇತ್ತೀಚೆಗೆ ಚೌಡಾಪೂರ ಶಾಖೆಯ ಜೆಸ್ಕಾಂ ಎಎಲ್ಎಂ ಸಂತೋಷ್ ಅವರು ವಿದ್ಯುತ್ ಅವಘಡದಿಂದ ಮರಣ ಹೊಂದಿದ ಪ್ರಯುಕ್ತ ಅವರ ಧರ್ಮ ಪತ್ನಿಯಾದ ಸಿಂಧು ಅವರಿಗೆ ಜೆಸ್ಕಾಂ ಇಲಾಖೆಯಿಂದ ಅಫ್ಜಲಪುರ್ ಮತಕ್ಷೇತ್ರದ ಶಾಸಕ ಎಂ ವಾಯ್ ಪಾಟೀಲ್ ಅವರ ಮೂಲಕ 6. ಲಕ್ಷ ರೂಪಾಯಿ ಚೆಕ್ನ್ನು ಕಲಬುರಗಿಯಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ಅಫ್ಜಲಪುರ್ ಇಲಾಖೆಯ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ನಾಗರಾಜ್ ಕೆ, ಮಹಾರಾಜ್ ಜಮಾದಾರ್, ಪಾಂಡುರಂಗ ಸುತಾರ್, ಶರಣು ಸೇರಿಕಾರ, ಭೂತಾಳ ಪೂಜಾರಿ, ಸೈಯದ್ ಇಸ್ ಇದ್ದರು.