ಮಹೆಬಸ್ ಮಸಜಿದ್/ ಯತಿಮ್ ಖಾನಾಗಳ ಚುನಾವಣೆ ನಡೆಸಲು ಜನತಾ ಪಕ್ಷ ಆಗ್ರಹ

0
29

ಕಲಬುರಗಿ: ನಗರದ ಮಸಜಿದ್ ಎ ಮಹೆಬಸ್ ಮತ್ತು ಅಂಜುಮನ್ ಎ ಅನಸರೂಫ್ಫ ಯತಿಮ್ ಖಾನಾ ಸೇರಿದಂತೆ ಅವಧಿ ಮುಗದಿರುವ ಸಂಸ್ಥೆಗಳ ಚುನಾವಣೆ ನಡೆಸಬೇಕೆಂದು ಜನತಾ ಪಕ್ಷದ ಮುಖಂಡರು ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಶನಿವಾರ ಕಲಬುರಗಿ ನಗರಾಭಿವೃದ್ಧಿ ಇಲಾಖೆಯ ಆವರಣದಲ್ಲಿರುವ ಜಿಲ್ಲಾ ವಕ್ಫ್ ಇಲಾಖೆಯ ಜಿಲ್ಲಾ ಅಧಿಕಾರಿ ಹಜರತ್ ಅಲಿ ನದಾಫ್ ಅವರಿಗೆ ಭೇಟಿ ನೀಡಿದ ಜನತಾ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಶೀರಾಜ್ ಶಾಬ್ದಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

Contact Your\'s Advertisement; 9902492681

ಕಲಬುರಗಿ ನಗರ ಸೇರಿದಂತೆ ವಕ್ಫ್ ಇಲಾಖೆಯಲ್ಲಿ ನೊಂದಾಯಿಸಲಾದ ಮಸಜಿದ್ ಎ ಮಹೆಬಸ್ ಮತ್ತು ಅಂಜುಮನ್ ಎ ಅನಸರೂಫ್ಫ ಯತಿಮ್ ಖಾನಾ ಸೇರಿ ಹಲವು ಪ್ರಮುಖ ಸಂಘ ಸಂಸ್ಥೆಯಗಳಿಗೆ 8-10 ವರ್ಷಗಳು ಕಳೆದಿವೆ. ವಕ್ಫ್ ಇಲಾಖೆ ಇಂತಹ ಸಂಘ ಸಂಸ್ಥೆಗಳ ಚುನಾವಣೆ ನಡೆಸಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

45 ದಿನಗಳಲ್ಲಿ ಅವಧಿ ಮುಗದಿರುವ ಪ್ರತಿಷ್ಠಿತ ಸಂಸ್ಥೆಗಳಿಗೆ ವಕ್ಫ್ ಇಲಾಖೆ ಚುನಾವಣೆ ಹಾಗೂ ನೂತನ ಸದಸ್ಯತ್ವಕ್ಕೆ ಆಹ್ವಾನಿಸಿದಿದರೆ ಇಲಾಖೆ ಹೋರಾಟ ನಡೆಸಬೇಕಾಗುತ್ತದೆ ಎಂದು ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದರು.

ರಿದಲಾನ್, ಶೇಖ್ ಸೈಫನ್, ಆಕಾಶ್, ಸಮಾಜಿಕ ಕಾರ್ಯಕರ್ತ ಮಾನಸಿಂಗ್ ಆರ್ ಚೌಹಾಣ್ ಸೇರಿದಂತೆ ‌ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here