CUK: ಗುಣಮಟ್ಟದ ಸಂಶೋಧನಾ ಲೇಖನಗಳ ಬರವಣಿಗೆ ದಿನದ ಕಾರ್ಯಾಗಾರ

0
18

ಕಲಬುರಗಿ: “ಗುಣಮಟ್ಟದ ಸಂಶೋಧನಾ ಪ್ರಬಂಧಗಳನ್ನು ಬರೆಯಲು ಮತ್ತು ಪ್ರಕಟಿಸಲು ಅಧ್ಯಾಪಕರು ಉನ್ನತ ಶ್ರೇಯಾಂಕದ ಮತ್ತು ಹೆಚ್ಚು ಪ್ರಭಾವುಳ್ಳ ನಿಯತಕಾಲಿಕಗಳನ್ನು ಓದಬೇಕು” ಎಂದು ಸಿಯುಕೆಯ ಗೌರವಾನ್ವಿತ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು.

ಸಿಯುಕೆ ಕೇಂದ್ರ ಗ್ರಂಥಾಲಯವು ಭಾರತೀಯ ಗ್ರಂಥಾಲಯ ಸಂಘ, ನವದೆಹಲಿಯ ಸಹಯೋಗದಲ್ಲಿ ಆಯೋಜಿಸಿದ್ದ ‘ಐಇಇಇ-ಗುಣಮಟ್ಟದ ಸಂಶೋಧನಾ ಲೇಖನಗಳ ಬರವಣಿಗೆ’ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಪದ್ಮಶ್ರೀ ಡಾ.ಎಸ್.ಆರ್. ರಂಗನಾಥನ್ ರವರ 131ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯ ಅಂಗವಾಗಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕೇಂದ್ರ ಗ್ರಂಥಾಲಯದಲ್ಲಿ ಜ್ಞಾನದ ಸಂಕೇತವಾಗಿ ಸರಸ್ವತಿ ದೇವಿಯ ಪ್ರತಿಮೆಯನ್ನು ಕುಲಪತಿಗಳು ಅನಾವರಣಗೊಳಿಸಿದರು.

Contact Your\'s Advertisement; 9902492681

ಅವರು ಮುಂದುವರೆದು ಮಾತನಾಡಿ “ಕಾರ್ಯಾಗಾರದ ವಿಷಯವು ತುಂಬಾ ಸೂಕ್ತವಾಗಿದೆ ಮತ್ತು ಪ್ರಸ್ತುತವಾಗಿದೆ. ನಾವು ಪ್ರತಿದಿನ ನಮ್ಮ ಜ್ಞಾನವನ್ನು ನವೀಕರಿಸಬೇಕು ಮತ್ತು ನಾವು IಓಈಐIಃಓಇಖಿ, ಇ-ಶೋಧ್ ಸಿಂಧು ಇತ್ಯಾದಿಗಳ ಮೂಲಕ ಆನ್‍ಲೈನ್ ಜರ್ನಲ್‍ಗಳೀಂದ ಮಾಹಿತಿ ಪಡೆಯಬಹುದು. ನಾವು ಲೇಖನಗಳನ್ನು ಪ್ರಕಟಿಸುವಲ್ಲಿ ಅತ್ಯಂತ ಪ್ರಾಮಾಣಿಕ ಮತ್ತು ನೈತಿಕವಾಗಿರಬೇಕು. ಪ್ರತಿಯೊಬ್ಬರೂ ಕೃತಿಚೌರ್ಯದ ನೀತಿಯನ್ನು ಅನುಸರಿಸಬೇಕು ಮತ್ತು ಪ್ರಕಟಣೆಯು ಕೃತಿಚೌರ್ಯದ 10% ಕ್ಕಿಂತ ಕಡಿಮೆ ಇರಬೇಕು.

ಯುಜಿಸಿ ಮಾರ್ಗಸೂಚಿಯ ಪ್ರಕಾರ ಕೃತಿಚೌರ್ಯವು 10% ಕ್ಕಿಂತ ಹೆಚ್ಚು ಇದ್ದರೆ ಅಂತಹ ಪ್ರಬಂಧವನ್ನು ಸ್ವೀಕರಿಸಲಾಗುವುದಿಲ್ಲ. ಸಿಯುಕೆಯ ಗ್ರಂಥಾಲಯವು ಬಹಳ ಮುಖ್ಯವಾದ ಸಾಫ್ಟ್‍ವೇರ್, ಡೇಟಾಬೇಸ್‍ಗಳು ಮತ್ತು ಇ-ಸಂಪನ್ಮೂಲಗಳನ್ನು ಹೊಂದಿದೆ, ಆದ್ದರಿಂದ ಗುಣಮಟ್ಟದ ಪೇಪರ್‍ಗಳನ್ನು ಪ್ರಕಟಿಸಲು ಅಧ್ಯಾಪಕರು ಇದನ್ನು ಬಳಸಿಕೊಳ್ಳಬೇಕು” ಎಂದು ಅವರು ಹೇಳೀದರು.

ಸಿಯುಕೆಯ ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ್ ಅವರು ಅಧ್ಯಾಪಕರನ್ನುದ್ದೇಶಿಸಿ ಮಾತನಾಡಿ, “ಪರಿಮಾಣಾತ್ಮಕ ಸಂಶೋಧನೆಯೊಂದಿಗೆ ಗುಣಾತ್ಮಕ ಸಂಶೋಧನೆಗೂ ಪ್ರಾಮುಖ್ಯತೆ ನೀಡಬೇಕು. ಸಂಶೋಧನೆಯು ಕಾರ್ಯಸಾಧ್ಯತೆ, ಆಸಕ್ತಿ, ಹೊಸತನವನ್ನು ಹೊಂದಿರಬೇಕು ಮತ್ತು ಅದು ಕೇವಲ ಪ್ರಕಟಣೆಗಾಗಿ ಇರಬಾರದು. ಸಂಶೋಧನೆಯಲ್ಲಿ ನೈತಿಕತೆಯು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಎಲ್ಲಾ ಸಂಶೋಧನೆಗಳು 100% ನೈತಿಕವಾಗಿರಬೇಕೆಂದು ನಿರೀಕ್ಷಿಸಲಾಗುತ್ತದೆ” ಎಂದು ಅವರು ಹೇಳಿದರು.

ಸ್ಕೂಲ್ ಆಫ್ ಎಂಜಿನಿಯರಿಂಗ್‍ನ, ಡೀನ್, ಡಾ. ಪರಮೇಶ್ ಅವರು ಮಾತನಾಡಿ “Iಇಇಇ ಬಳಕೆ ಆನ್‍ಲೈನ್ ವಿಷಯಗಳ ಸಂಶೋಧನೆಗೆ ಬಹಳ ಮುಖ್ಯವಾಗಿದೆ. ನಮ್ಮ ವಿದ್ಯಾರ್ಥಿಗಳು Iಇಇಇ ವಿದ್ಯಾರ್ಥಿಗಳ ವಿಭಾಗದ ಮೂಲಕ ಅನೇಕ ಚಟುವಟಿಕೆಗಳನ್ನು ಮಾಡಿದ್ದಾರೆ” ಎಂದು ಹೇಳಿದರು

ವಿಶ್ವವಿದ್ಯಾನಿಲಯದ ಗ್ರಂಥಪಾಲಕ ಡಾ.ಪಿ.ಎಸ್. ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಾಗಾರದ ಉದ್ದೇಶಗಳನ್ನು ವಿವರಿಸಿದರು. ಪೆÇ್ರ.ಶ್ರೀಕಂಠಯ್ಯ ಕೆ ಸಿ, ಡೀನ್ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್, ಪರೀಕ್ಷಾ ನಿಯಂತ್ರಕ ಕೋಟ ಸಾಯಿಕೃಷ್ಣ, ಬೆಂಗಳೂರಿನ ಐಇಇಇ, ಕ್ಲೈಂಟ್ ಸರ್ವಿಸ್ ಮ್ಯಾನೇಜರ್ ಡಾ. ಧನುಕುಮಾರ್ ಪಟ್ಟಣಶೆಟ್ಟಿ, ತೆಲಂಗಾಣ ರಾಜ್ಯ ಗ್ರಂಥಾಲಯ ವೃತ್ತಿಪರ ಸಂಘದ ಅಧ್ಯಕ್ಷ ಪೆÇ್ರ.ಎನ್.ಲಕ್ಷ್ಮಣ್ ರಾವ್, ಆಶಿಶ್ ಕೆ ದಾಸ್ ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು. ಡಾ. ಜಿ ಜೆ ಪಿ ದೀಕ್ಷಿತ್ ಕಾರ್ಯಕ್ರಮ ನಿರೂಪಿಸಿದರು, ರಾಜಕುಮಾರ ಕಲ್ಯಾಣಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here