ಕಲಬುರಗಿ: ನಗರದ ಕನ್ನಡ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ಶ್ರೀ ಸುರೇಶ ಕಾನೇಕರ ಅಭಿಮಾನಿ ಬಳಗ ವತಿಯಿಂದ ಜನಕಲ್ಯಾಣ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಭಾರತೀಯ ಬೌದ್ಧ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಎಸ್, ಕಾನೇಕರ ಅವರ 49ನೇ ಸಂಭ್ರಮ ಮತ್ತು ಚಿಂತನಾ ಸಭೆಯನ್ನು ತಳಸಮುದಾಯದ ಶ್ರಮಿಕ ಜೀವಿಗಳಿಂದ ಉದ್ಘಾಟಿಸಿದರು.
ಪೂಜ್ಯ ಭಂತೆ ವರಜ್ಯೋತಿ, ಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮಿಜಿ, ಪೂಜ್ಯ ಶ್ರೀ ಜ್ಞಾನಪ್ರಕಾಶ ಸ್ವಾಮಿಜಿ, ಡಾ. ಜಯದೇವಿ ಗಾಯಕವಾಡ, ಸೂರ್ಯಕಾಂತ ನಿಂಬಾಳಕ, ಸುರೇಶ ಎಸ್. ಕಾನೇಕರ್, ಡಾ. ಸಂಧ್ಯಾ ಎಸ್. ಕಾನೇಕರ್, ಕೀರ್ತಿರತನ್ ಸೋನಾಲೆ, ಕಾಳಿದಾಸ ಸೂರ್ಯವಂಶಿ, ಡಾ. ಗವಿಸಿದ್ದಪ್ಪ ಎಚ್. ಪಾಟೀಲ, ರಾಜಕುಮಾರ ಉಜ್ವವಲೆ, ಡಾ. ಸುನೀಲ ಎಸ್. ಜಾಬಾದಿ, ಸಿದ್ಧಾರ್ಥ ಚಿಮ್ಮಾ ಇದಲಾಯಿ ಇದ್ದರು.